Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
KGF 2 Toofan Song: ತೂಫಾನ್ ರೂಪದಲ್ಲಿ ಬಂದ ರಾಕಿ ಭಾಯ್ ಯಶ್!
ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಅಬ್ಬರ ಶುರುವಾಗೋಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿದೆ. ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ. ಈ ದಿನಕ್ಕಾಗಿ ರಾಕಿ ಭಾಯ್ ಅಭಿಮಾನಿಗಳು ಕಾದು ಕುಳಿತಿದ್ದರು. ಇನ್ನು ಸಿನಿಮಾ ರಿಲೀಸ್ಗೆ ಹತ್ತಿರ ಆಗುತ್ತಿದ್ದ ಹಾಗೆ ಸಿನಿಮಾ ಪ್ರಚಾರ ಕಾರ್ಯಗಳು ಜೋರಾಗಿ ಶುರುವಾಗಲಿವೆ.
ಈಗ 'ಕೆಜಿಎಫ್' ಕಡೆಯಿಂದ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಸಿನಿಮಾಗಾಗಿ ಕಾಯುತ್ತ ಇರುವವರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಲು ಸಿನಿಮಾ ತಂಡ ಈಗ ಚಿತ್ರದ ಹೊಸ ಹಾಡನ್ನು ರಿಲೀಸ್ ಮಾಡಿದೆ. ಟೀಸರ್ ನಂತರ ಬಂದ ಈ ಹಾಡು ಸಂಚಲನ ಮೂಡಿಸಿದೆ. ಟೈಟಲ್ಗೆ ತಕ್ಕ ಹಾಗೆ ತೂಫಾನ್ ಹಾಡು ಬಿರುಗಾಳಿ ಎಬ್ಬಿಸುತ್ತಿದೆ.
Recommended Video
KGF In Bollywood: ಅಕ್ಷಯ್ ಕುಮಾರ್ ಹಿಂದಿ ಸಿನಿಮಾದಲ್ಲಿ ಕನ್ನಡದ 'ಕೆಜಿಎಫ್' ಮಾತು
'ಕೆಜಿಎಫ್ 2' ಚಿತ್ರದ ಖದರ್ ಹೇಗೆ ಇರಲಿದೆ ಎನ್ನುವುದನ್ನು ಚಿತ್ರದ ಮೊದಲ ಹಾಡು ರಿವೀಲ್ ಮಾಡಿದೆ. ಈ ಹಾಡು ರಾಕಿ ಭಾಯ್ ಹವಾ ಚಿತ್ರದಲ್ಲಿ ಹೇಗೆ ಮುಂದುವರೆಲಿದೆ ಎನ್ನುವ ಬಗ್ಗೆ ಹೇಳುತ್ತಿದೆ. ರವಿ ಬಸ್ರೂರು ಸಂಗೀತ ಲಿರಿಕಲ್ ವಿಡಿಯೋಗೆ ಕಿಕ್ ಕೊಟ್ಟಿದೆ. ಹಾಗಿದ್ದರೆ ಹಾಡಿನಲ್ಲಿ ಏನೆಲ್ಲಾ ಅಡಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...
ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ
'ಕೆಜಿಎಫ್ 2' ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ತೂಫಾನ್ ಹಾಡಿಗೆ ಸಾಹಿತ್ಯ ಮತ್ತು ಸಂಗೀತ ರವಿ ಬಸ್ರೂರು ಅವರದ್ದೇ ಆಗಿದೆ. ಹಾಡಿನ ಸಾಹಿತ್ಯ ಸಂಪೂರ್ಣವಾಗಿ ರಾಕಿ ಭಾಯ್ ಬಗ್ಗೆ ವರ್ಣನೆ ಮಾಡಿದೆ. ರಾಕಿ ಭಾಯ್ ಖದರ್ ಹೇಗೆ ಇರಲಿದೆ ಎನ್ನುವುದನ್ನು ಹೇಳಲಾಗಿದೆ. 'ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ ಸರ್ರ್... ಅಂತ ಸುಡುವ ಜ್ವಾಲಾಗ್ನಿ, ಕರ್ರ್... ಅಂತ ಕಡಿಯುವ ಕತ್ತಿಇವನು ಎನ್ನುವ ಸಾಲುಗಳು, ಈ ಚಿತ್ರದಲ್ಲಿ ರಾಕಿ ಭಾಯ್ ಎದುರು ನಿಲ್ಲುವ ಧೈರ್ಯ ಯಾರು ಮಾಡಲೇ ಬಾರದು ಎಂದು ಹೇಳುತ್ತಿವೆ.
Salaar Release Date: ಇನ್ನೂ ಬದಲಾಗಿಲ್ಲ 'ಸಲಾರ್' ರಿಲೀಸ್: ಚಿತ್ರತಂಡದ ಗಿಮಿಕ್ ಏನು?
|
ಡೈಲಾಗ್ನಿಂದಲೇ ಶುರುವಾಗುತ್ತೇ 'ತೂಫಾನ್'
ಈ ಹಾಡು ಬರಿಯ ಹಾಡಲ್ಲ. ಬದಲಿಗೆ ಒಂದು ಪುಟ್ಟ ಕಥೆ. ಧೈರ್ಯ ಇಲ್ಲದ ಬಡಪಾಯಿಗಳಿಗೆ ರಾಕಿ ಭಾಯ್ ಶಕ್ತಿಯಾಗಿ ನಿಂತ ಬಗ್ಗೆ ಕಥೆ ಹೇಳುವ ಹಾಡಿದು. ಹಾಗಾಗಿ ಹಾಡಿನ ಆರಂಭದಲ್ಲಿ ಒಂದಷ್ಟು ಡೈಲಾಗ್ಗಳು ಬರುತ್ತವೆ. 'ನಮಗೆ ಧೈರ್ಯ ಇರಲಿಲ್ಲ, ಶಕ್ತಿ ಇರಲಿಲ್ಲ, ನಂಬಿಕೆ ಇರಲಿಲ್ಲ, ಆದರೆ ತುಂಬಾ ವರ್ಷ ಆದ್ಮೇಲೆ ಸಾವನ್ನು ನಾವು ತುಳಿದೆವು. ಅವನು ಕತ್ತಿ ಬೀಸಿದ ರಭಸಕ್ಕೆ ಒಂದು ಗಾಳಿ ಹುಟ್ಟಿ ಕೊಳ್ತು. ಆ ಗಾಳಿ ನರಾಚಿಯಲ್ಲಿರುವ ಪ್ರತಿಯೊಬ್ಬರಿಗೂ ಉಸಿತು ಕೊಟ್ತು. ನಿಮಗೆ ಒಂದು ಸಲಹೆ ಕೊಡ್ತಿನಿ. ನೀವೂ ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ' ಎನ್ನುವ ಡೈಲಾಗ್ಗಳು ಇವೆ. ಇದು ಕೆಜಿಎಫ್ ಮೊದಲ ಭಾಗದಲ್ಲಿ ಏನಾಯ್ತು ಎನ್ನುವ ಕಥೆ.
ತೂಫಾನ್ನಲ್ಲಿ ರವಿ ಬಸ್ರೂರು ಸಂಗೀತ ಘರ್ಜನೆ!
ತೂಫಾನ್ ಲಿರಿಕಲ್ ಹಾಡು ಮಾತ್ರ ರಿಲೀಸ್ ಆಗಿದೆ. ಆದರೆ ಈ ಹಾಡಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿರೋದು ಸಂಗೀತ. ರವಿಬ್ರೂರು ಸಂಗೀತ ಘರ್ಜನೆ ಹಾಡಿನಲ್ಲಿ ಜೋರಾಗಿದೆ. ಇದು ಕೆಜಿಎಫ್ ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರೇಷನ್ ಆಗಿದೆ. ರಾಕಿ ಭಾಯ್ ಅಬ್ಬರದ ಬಗ್ಗೆ ಚಿತ್ರದ ಟ್ರೈಲರ್ ರಿಲೀಸ್ ಬಳಿಕ ಮತ್ತಷ್ಟು ರಿವೀಲ್ ಆಗಲಿದೆ. ಈ ಹಾಡಿನಲ್ಲಿ ನಟ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿಯ ಕೆಲವು ಫೋಟೊಗಳನ್ನು ಮಾತ್ರ ಅಳವಡಿಸಲಾಗಿದೆ.
Yash: ಮಾರ್ಚ್ 21ಕ್ಕೆ 'KGF 2' ಸರ್ಪ್ರೈಸ್, ಶುರುವಾಗ್ತಿದೆ ರಾಕಿ ಖದರ್!
ಹೇಗಿರಲಿದೆ ' ಕೆಜಿಎಫ್ 2' ಅಂತ್ಯ?
ಇನ್ನು 'ಕೆಜಿಎಫ್ 2' ಚಿತ್ರಕ್ಕಿಂತಲೂ, ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಯಾಕೆಂದರೆ 'ಕೆಜಿಎಫ್ 3' ಬರುವುದು ಅನುಮಾನವೇ. ಹಾಗಾಗಿ ರಾಕಿ ಭಾಯ್ ಸಾಮ್ರಾಜ್ಯದ ಅಂತ್ಯ ಇದೆ ಸಿನಿಮಾದಲ್ಲಿ ಆಗಬೇಕು. ಹಾಗಾಗಿ ಕ್ಲೈಮ್ಯಾಕ್ಸ್ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹಬ್ಬಿವೆ. ಈಗಾಗಲೇ ಈ ಚಿತ್ರದಲ್ಲಿ ರಾಕಿಭಾಯ್ ಅಂತ್ಯ ಆಗುತ್ತೆ. ಅವನು ಸತ್ತು ಹೋಗುತ್ತಾನೆ ಎನ್ನುವ ಊಹಾ ಪೊಹಗಳು ಹಬ್ಬಿವೆ. ಆದರೆ ಅದಕ್ಕಾಗಿ ಸಿನಿಮಾ ತೆರೆಗೆ ಬರುವ ತನಕ ಕಾಯಲೇ ಬೇಕು.