ದೀಪಾ ಸನ್ನಿಧಿಗೆ ಈಗ ಡಬ್ಬಲ್ ದೀಪಾವಳಿ

ಜೊತೆಗೆ ಸದ್ಯವೇ ಬಿಡುಗಡೆ ಆಗಲಿರುವ ಪವರ್ ಸ್ಟಾರ್ ಪುನೀತ್ ಹಾಗೂ ಯಶಸ್ವೀ ನಿರ್ದೇಶಕ ಯೋಗರಾಜ್ ಭಟ್ ಸಂಗಮದ "ಪರಮಾತ್ಮ" ದೀಪಾರ ಎರಡನೇ ಚಿತ್ರ. ಬಿಡುಗಡೆಗೆ ಮುಂಚೆಯೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಹಾಡುಗಳು ಎರ್ರಾಬಿರ್ರಿ ಕ್ಲಿಕ್ ಆಗಿರೋದು ದೀಪಾರಿಗೆ ಇನ್ನೊಂದು ದೀಪಾವಳಿ ಕಾದಿರುವುದರ ಸೂಚನೆ. ಹೀಗಾಗಿ ದೀಪಾಗೆ ಈ ಬಾರಿ ಡಬ್ಬಲ್ ದೀಪಾವಳಿ.
ಇಷ್ಟು ದಿನ ಸ್ಮೈಲ್ ನಲ್ಲೇ ಮಾತಾಡುತ್ತಿದ್ದ ದೀಪಾ ಇದೀಗ ಸಾರಥಿಗೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಮಾತಾಡಲು ಪ್ರಾರಂಭಿಸಿದ್ದಾರಂತೆ. ಇಷ್ಟು ದಿನ ಮುಗುಳ್ನಗು ಚೆಂದ ಎನ್ನುತ್ತಿದ್ದವರು ಮುಂದೆ ಮಾತೂ ಚೆಂದ ಎನ್ನಬಹುದು.
"ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ, ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ" ಎಂದು ಈಗಾಗಲೇ ಹುಡುಗರು ಹಾಡತೊಡಗಿರುವ ಸುದ್ದಿ ಇದೆ. ಇನ್ನು ಪರಮಾತ್ಮ ನಂತರ ಏನೇನ್ ಮಾಡ್ತೀವಿ ನೋಡ್ತಾ ಇರಿ ಅಂದ್ರೆ ಕಷ್ಟ ಕಷ್ಟ!
ಸದ್ಯಕ್ಕಂತೂ ಸಂತೋಷದ ಅಲೆಯ ಮೇಲೆ ತೇಲಾಡುತ್ತಿರುವ ದೀಪಾ ಇದೀಗ ಪರಮಾತ್ಮನ ಧ್ಯಾನ ಪ್ರಾರಂಭಿಸಲಿದ್ದಾರೆ ಎನ್ನುತ್ತಿವೆ ಅವರ ಆಪ್ತವೃಂದ. ಕನ್ನಡದ ಈ ಅಚ್ಚ ಮಲ್ಲಿಗೆ ದೀಪಾ, ದೀಪವೇ ಆಗಿ ಸ್ಯಾಂಡಲ್ ವುಡ್ ನಲ್ಲಿ ದೀಪಾವಳಿಯನ್ನೇ ಆಚರಿಸುತ್ತಾರೋ ಎಂಬುದು ಸದ್ಯಕ್ಕೆ ರಹಸ್ಯ!


Click it and Unblock the Notifications











