Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾಜಿ ಮಲ್ಲಿಗೆ, ಗೌತಮ್ ಈ ವಾರ ತೆರೆಗೆ
ತಮಿಳಿನ ಯಶಸ್ವಿ ಚಿತ್ರ ದೇವತೈ ಕಂಡೇನ್ನ ರೀಮೇಕ್ ಆದ ಈ ಚಿತ್ರದಲ್ಲಿ ಡಾ.ಜಯಮಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಆರ್.ಸೀನು ಅವರ ಛಾಯಾಗ್ರಹಣ, ಸಾಧು ಕೋಕಿಲಾರ ಸಂಗೀತ ಸಂಯೋಜನೆ, ರಾಮ್ನಾರಾಯಣ್ರ ಸಾಹಿತ್ಯ, ಪಳನಿರಾಜ್ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
ಸುರಿಯುವ ಮಳೆ, ಹರಿವ ಹೊಳೆ ಸಿಗದು ನೋಡು ಯಾರ ಕೈಗೂ ಎಂಬ ಅಡಿಬರಹದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಗೌರಿ ಮಂಜಾಲ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಜಯ್ ಟೀ ಮಾರುವ ಹುಡುಗನಾಗಿದ್ದರೆ, ಗೌರಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕೋಮಲ್, ಬುಲೆಟ್ ಪ್ರಕಾಶ್, ನಾಗಶೇಖರ್, ಮುನಿ ಉಳಿದ ತಾರಾಗಣದಲ್ಲಿದ್ದಾರೆ.
ಗೌತಮ್: ಸಿನರ್ಜಿ ಇಮೇಜಸ್ ಸಂಸ್ಥೆಯ ಪ್ರಥಮ ಕಾಣಿಕೆಯಾಗಿ ಮಾಲಿನಿ ಸುಬ್ರಹ್ಮಣ್ಯಂ ಅವರು ನಿರ್ಮಿಸಿರುವ ಗೌತಮ್ ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಸಾಂಸಾರಿಕ ಚಿತ್ರವನ್ನು ಹಿರಿಯ ನಟ ಆರ್.ಎನ್.ಆರ್. ಮೊಮ್ಮಗ ಕೆ.ರಾಜೀವ್ ಪ್ರಸಾದ್ ನಿರ್ದೇಶಿಸಿದ್ದಾರೆ. ಸುರೇಶ್ ಕೃಷ್ಣರ ಜೊತೆ ಸಹನಿರ್ದೇಶಕರಾಗಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಕೇವಲ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮ್ ಈ ಚಿತ್ರದಲ್ಲಿ ತುಂಬಿದ ಕುಟುಂಬವೊಂದರ ಸದಸ್ಯನಾಗಿ ಅಭಿನಯಿಸುತ್ತಿದ್ದಾರೆ. ಸೋಮಾರಿಯಾಗಿ ಎಲ್ಲರಿಂದಲೂ ನಿಂದನೆಗೊಳಗಾಗಿ ಕೊನೆಯಲ್ಲಿ ದೊಡ್ಡದೊಂದು ಸಾಧನೆ ಮಾಡುವ ಯುವಕನ ಪಾತ್ರ ಪ್ರೇಮ್ನದು. ನಟಿ ಸಾರಾ ಆಲಂಬರ ನಾಯಕಿಯಾಗಿದ್ದು, ಹೆಸರಾಂತ ತಮಿಳು ನಿರ್ದೇಶಕ ಸುರೇಶ್ ಕೃಷ್ಣ ಅವರ ಕಥೆ-ಚಿತ್ರಕಥೆ, ಗುರುಕಿರಣ್ ಅವರ ಸಂಗೀತ ಸಂಯೋಜನೆ, ಎಸ್.ಆರ್. ಸುಧಾಕರ್ರವರ ಛಾಯಾಗ್ರಹಣ ಕೆಲಸ ಈ ಚಿತ್ರಕ್ಕಿದೆ.
ನಿರ್ಮಾಪಕರ ಪರವಾಗಿ ಇಡೀ ಚಿತ್ರದ ಜವಾಬ್ದಾರಿಯನ್ನು ಸೂರಪ್ಪ ಬಾಬು ನಿರ್ವಹಿಸಿದ್ದಾರೆ. ಅನಂತ್ನಾಗ್, ಸುಧಾರಾಣಿ, ಚಂದ್ರಶೇಖರ್, ಕೋಕಿಲಾ ಮೋಹನ್, ವಿನಯಾ ಪ್ರಸಾದ್, ರಮೇಶ್ ಭಟ್, ಕಿಶೋರಿ ಬಲ್ಲಾಳ್ ಪ್ರಮುಖ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಗಾಯಕನಾಗಿ
ಬದಲಾದ
ನಾಯಕ
ಅನಿರುದ್ಧ್!
ನೆನಪಿರಲಿ
ಪ್ರೇಮ್
ರ
ಗೌತಮ್
ಚಿತ್ರದ
ಟ್ರೈಲರ್
ಗೌತಮ್
ಎಂಬ
ಹಳೆಯ
ಸರುಕಿನಲ್ಲಿ
ಪ್ರೇಮ್