Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಂದ್ರಿತಾ ರೇಗೆ ರಜೆ ಕೊಡಿಸಿದ ವಿನಯ್ ಆಕ್ಸಿಡೆಂಟ್
ಯಾಕೋ ನಟಿ ಐಂದ್ರಿತಾ ರೇ ನಸೀಬು ನೆಟ್ಟಗಿದ್ದಂಗಿಲ್ಲ. ಕನ್ನಡದ ಹೆಸರಾಂತ ನಿರ್ದೇಶಕ ಚಿತ್ರಗಳಲ್ಲಿ ನಟಿಸಿದರೂ ಆಕೆಯ ಕೆರಿಯರ್ ಹಿಂದೆಹಿಂದಕ್ಕೆ ಹೋಗುತ್ತಿದೆ. ಯೋಗರಾಜ್ ಭಟ್ಟರ ಎರಡು, ದುನಿಯಾ ಸೂರಿಯ ಒಂದು, ಎಸ್. ನಾರಾಯಣ್ ನಿರ್ದೇಶನದ ಇನ್ನೊಂದು ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಈಗ ಖಾಲಿ ಕುಳಿತಿರಬೇಕಾದ ಸ್ಥಿತಿ ಬಂದಿದೆ.
ಮೊದಲು ಐಂದ್ರಿತಾರನ್ನು ಅದೃಷ್ಟವಂತ ನಟಿ ಎಂದೇ ಬಿಂಬಿಸಲಾಗುತ್ತಿತ್ತು. ಹಾಗೇ ಇದ್ದರೂ ಕೂಡ. ಆದರೀಗ ಅದು ಉಲ್ಟಾ ಆಗಿದೆ. ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಜತೆ ಗಲಾಟೆ ಮಾಡಿಕೊಂಡ ನಂತರ ಹೀಗಾಯ್ತೋ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲವೋ ಒಂದು ಗೊತ್ತಾಗದೇ ಇಡೀ ಗಾಂಧಿನಗರ ತಲೆ ಕೆರದುಕೊಳ್ಳುತ್ತಿದೆ.
ಚಿತ್ರಗಳು ಗೆದ್ದರೂ ಅವರಿಗೆ ಅವಕಾಶಗಳು ಅಟ್ಟಿಸಿಕೊಂಡು ಬರುತ್ತಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚಿಗೆ ಬಿಡುಗಡೆಯಾಗಿ ಗೆದ್ದಿರುವ ಪಾರಿಜಾತ. ಪಾರಿಜಾತದ ನಂತರ ಈ 'ಪಾರಿಜಾತ'ಕ್ಕೆ ದಕ್ಕಿರುವುದು ಕೇವಲ 'ಮೊಗ್ಗಿನ ಮನಸು' ಶಶಾಂಕ್ ಅವರ ಹೊಸ ಚಿತ್ರವೊಂದರ ಆಫರ್. ಅದು ಬಿಟ್ಟರೆ ಐಂದ್ರಿತಾ ರೇ ಕೈ ಖಾಲಿ ಖಾಲಿ! ಮುಂದಿನ ಪುಟ ನೋಡಿ...