ಹಬ್ಬದ ಸಮಯಕ್ಕೆ,ಗಣೇಶ ಮತ್ತೆ ಬಂದ
ಭಾದ್ರಪದ ಶುಕ್ಲ ಚತುರ್ಥಿಯ ಶುಭದಿನ ಗೌರಿನಂದನನ ಆಗಮನ. ಅದರ ಮರುದಿನ ಸೌಭಾಗ್ಯ ಪಿಕ್ಚರ್ಸ್ ಅವರ ಗಣೇಶನ ಆಗಮನ. ಅಂದರೆ ಫಣಿ ರಾಮಚಂದ್ರ ನಿರ್ದೇಶನದ ಗಣೇಶ ಮತ್ತೆ ಬಂದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹಲವು ವರ್ಷಗಳ ನಂತರ ಫಣಿರಾಮಚಂದ್ರ ಅವರು ಗಣೇಶನೊಂದಿಗೆ ಮತ್ತೆ ಬಂದಿದ್ದಾರೆ. ಗಣೇಶನನ್ನು ಪಟ್ಟಾಗಿ ಹಿಡಿದಿರುವ ನಿರ್ದೇಶಕರು ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ವಿಶಿಷ್ಟ ಮನೋರಂಜನೆ ನೀಡುವಲ್ಲಿ ಮುಂದಾಗಿದ್ದಾರೆ. ನಿರ್ಮಾಪಕ ಎಸ್.ಎ.ಚಿನ್ನೇಗೌಡರ ಪತ್ನಿ ಶ್ರೀಮತಿ ಜಯಮ್ಮಚಿನ್ನೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಅವರ ಜೇಷ್ಠ ಪುತ್ರ ವಿಜಯರಾಘವೇಂದ್ರ ನಾಯಕನಾಗಿ ಅಭಿನಯಿಸಿದ್ದಾರೆ. ಅವರೊಟ್ಟಿಗೆ ವಿಶಾಲ್ಹೆಗ್ಡೆ, ಅನಂತನಾಗ್, ನೀತು, ಪ್ರಜ್ಞಾ, ಪ್ರೀತಿ, ವಿನಯಾಪ್ರಕಾಶ್, ದೊಡ್ಡಣ್ಣ, ವಿಕ್ರಂಸೂರಿ ಮುಂತಾದವರಿದ್ದಾರೆ.
ಜೆ.ಎಂ.ಪ್ರಹ್ಲಾದ್ ಅವರು ಕತೆ ಬರೆದಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ, ಇಮ್ರಾನ್, ಚಿನ್ನಿಪ್ರಕಾಶ್ ನೃತ್ಯ, ಇಸ್ಮಾಯಿಲ್ ಕಲೆ, ರಾಮು, ಮಂಜುನಾಥ್ ಸಹನಿರ್ದೇಶನ, ರವಿಶಂಕರ್ ಹಾಗೂ ಜೈಕುಮಾರ್ ಅವರ ನಿರ್ಮಾಣನಿರ್ವಹಣೆ ಗಣೇಶ ಮತ್ತೆ ಬಂದ ಚಿತ್ರಕ್ಕಿದೆ.
(ದಟ್ಸ್ ಕನ್ನಡಸಿನಿ ವಾರ್ತೆ)
ವಿಜಯ್ ರ 'ಗಣೇಶ ಮತ್ತೆ ಬಂದ' ಚಿತ್ರಕ್ಕೆ ಸಂಗೀತ


Click it and Unblock the Notifications











