Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕಮಗಳೂರಲ್ಲಿ ಸಾಗಿದೆ 'ನಂ ಯಜಮಾನ್ರ' ದರ್ಬಾರು
27ವರ್ಷಗಳ ಹಿಂದೆ ತೆರೆಕಂಡ ಬಂಗಾರದ ಜಿಂಕೆ ಚಿತ್ರದ ನಂತರ ಸಾಹಸಸಿಂಹ ಡಾ:ವಿಷ್ಣುವರ್ಧನ್ ಹಾಗೂ ಖ್ಯಾತ ನಿರ್ದೇಶಕ ನಾಗಾಭರಣ ಸಂಗಮದ ನಂ ಯಜಮಾನ್ರು ಚಿತ್ರವನ್ನು ಕರಿಸುಬ್ಬು ಅವರು ಅರ್ಪಿಸಿ ರಾಜಶೇಖರ್ ಅವರು ನಿರ್ಮಿಸುತ್ತಿದ್ದಾರೆ.
ಬೆಂಗಳೂರಿನ ಹೊರವಲಯದ ಸ್ಯಾಮಿಸ್ ಡ್ರೀಂ ಲ್ಯಾಂಡ್ನಲ್ಲಿ 10 ದಿನಗಳ ಕಾಲ ಬಿರುಸಿನ ಚಿತ್ರೀಕರಣ ಪೂರೈಸಿರುವ ನಂ ಯಜಮಾನ್ರು ಮಾತಿನ ಭಾಗದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಡಾ:ವಿಷ್ಣುವರ್ಧನ್, ನವ್ಯಾ ನಾಯರ್, ಲಕ್ಷ್ಮೀ ಗೋಪಾಲಸ್ವಾಮಿ, ರಮೇಶ್ಭಟ್ ಹಾಗೂ ಚಿತ್ರಾಶೆಣೈ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ ಜನುಮದ ಜೋಡಿ.ಕಾಮ್ನ ಮಾಲೀಕನಾಗಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಂದಿನ ಪೀಳಿಗೆಯನ್ನು ಕಾಡುತ್ತಿರುವ ಸಾಮಾಜಿಕ ವಿಷಯ, ಅವುಗಳ ಸಾಧಕ-ಬಾಧಕಗಳ ವಿಶ್ಲೇಷಣೆ ಚಿತ್ರದಲ್ಲಿ ಅಡಕವಾಗಿದೆ. ನಾಗಾಭರಣ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಂಸಲೇಖ ಅವರ ಗೀತರಚನೆ, ಸಂಗೀತವಿದೆ. ರಮೇಶ್ಬಾಬು ಛಾಯಾಗ್ರಹಣ, ಶಿವು ಸಂಕಲನ, ಬಿ.ಎಲ್.ವೇಣು ಸಂಭಾಷಣೆ, ರಾಂಶೆಟ್ಟಿ ಸಾಹಸ, ಚಿನ್ನಿಪ್ರಕಾಶ್ ನೃತ್ಯ, ಎಂ.ಎಸ್.ಮಠ ಸಹ ನಿರ್ದೇಶನ.
ಡಾ:ವಿಷ್ಣುವರ್ಧನ್, ವಿಜಯರಾಘವೇಂದ್ರ, ಅನಂತನಾಗ್, ನವ್ಯನಾಯರ್, ಲಕ್ಷ್ಮೀ ಗೋಪಾಲಸ್ವಾಮಿ, ರಮೇಶ್ಭಟ್, ಚಿತ್ರಾಶೆಣೈ, ಉಮೇಶ್, ಮೈಕಲ್ಮಧು ಮುಂತಾದವರ ತಾರಾಗಣ ಚಿತ್ರದಲ್ಲಿದೆ.
ಪೂರಕ
ಓದಿಗೆ
ನಾಗಾಭರಣ
ಚಿತ್ರದಲ್ಲಿ
ವಿಷ್ಣು
ಜೊತೆ
ನವ್ಯಾ
ನಾಯರ್
ನವ್ಯಾ
ನಾಯರ್
ಚಿತ್ರಪಟ