Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಲ ಕಳಕೊಂಡವರ ಕಥೆ ವ್ಯಥೆ ಪುಟ್ಟಕ್ಕನ ಹೈವೇ
ಅಭಿವೃದ್ಧಿ ಎಂಬುದು ಕಾಲಾಂತರದಲ್ಲಿ ಪಡೆದುಕೊಂಡಿರುವ ಅರ್ಥಗಳೇ ಬೇರೆ. ಈ ಅಭಿವೃದ್ಧಿ ಮಂತ್ರದಲ್ಲಿ ಲಾಭ 'ಪಡೆದು ಕೊಂಡವರಿಗೂ' ಎಲ್ಲಾ ಕಳೆದು ಕೊಂಡವರಿಗೂ ಇರುವ ಅಂತರ ದೊಡ್ಡದು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಗಾರರು ಆದ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ಸಣ್ಣ ಕತೆಯೊಂದರ ಸ್ಪೂರ್ತಿಯನ್ನು ಇಟ್ಟುಕೊಂಡು ಬಿ.ಸುರೇಶ ಅವರು ಬರೆದಿರುವ ಚಿತ್ರ 'ಪುಟ್ಟಕ್ಕನ ಹೈವೇ'.
ಹೆದ್ದಾರಿಯ ಅಗತ್ಯ ಎಷ್ಟಿದೆಯೋ ಅದರಿಂದ ನೆಲ ಕಳಕೊಂಡವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಸರ್ಕಾರ ನೀಡುವ ಪರಿಹಾರಗಳು ಫಲಾನುಭವಿಗಳಿಗೆ ದೊರೆಯುವುದಕ್ಕಿಂತ ಮಧ್ಯವರ್ತಿಗಳಿಗೆ ತಲುಪುವುದೇ ಹೆಚ್ಚು. ಹೀಗೆ ಹೆದ್ದಾರಿಗಾಗಿ ನೆಲ ಕಳಕೊಳ್ಳುವ ಪುಟ್ಟಕ್ಕ, ತನ್ನ ನೆಲ ಮತ್ತು ಅದೇ ನೆಲದಲ್ಲಿ ಚಿರನಿದ್ರೆಯಲ್ಲಿರುವ ತನ್ನ ಗಂಡನ ಗೂಡನ್ನು ಉಳಿಸಿಕೊಳ್ಳಲು ಮಾಡುವ ಹೋರಾಟ ಈ ಚಿತ್ರದ ಕತೆ.
ಪುಟ್ಟಕ್ಕನಾಗಿ ಶ್ರುತಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಅಚ್ಯುತಕುಮಾರ್, ವೀಣಾಸುಂದರ್ ಪ್ರಧಾನ ಪಾತ್ರಗಳಲ್ಲಿ ಇದ್ದಾರೆ. ಹಂಸಲೇಖ ಅವರು ಕರ್ನಾಟಕದ ಸೂಫಿ ಸಂಗೀತಗಾರರ ಮಟ್ಟುಗಳನ್ನು ಈ ಚಿತ್ರಕ್ಕಾಗಿ ಅಳವಡಿಸಿ ಸಂಗೀತ ಮಾಡಿದ್ದಾರೆ.
ಯೋಗರಾಜ ಭಟ್ ಮೂರು ಹಾಡುಗಳನ್ನು ಬರೆದಿದ್ದಾರೆ. ಎಚ್.ಎಂ.ರಾಮಚಂದ್ರ ಛಾಯಾಗ್ರಾಹಣ ಇರುವ ಈ ಚಿತ್ರಕ್ಕೆ ಜೋ.ನಿ.ಹರ್ಷ ಸಂಕಲನವಿದೆ. ಬಿ.ಸುರೇಶ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಬರಲಿರುವ ಜನವರಿ, ಫೆಬ್ರವರಿಯಲ್ಲಿ ಈ ಚಿತ್ರ ಕನ್ನಡಿಗರೆದುರು ಬರಲಿದೆ.