Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಟಂ ಗರ್ಲ್ ಮುಮೈತ್ ನಿರ್ದೇಶನದ ಸಿನಿಮಾ ಹೇಗಿರುತ್ತೋ?
ದಕ್ಷಿಣ ಭಾರತದ ಪಡ್ಡೆಗಳ ನಿದ್ದೆಕೆಡಿಸಿರುವ ಐಟಂ ಗರ್ಲ್ ಮುಮೈತ್ ಖಾನ್, ಇದೀಗ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾಳೆ. 'ಒರಟ ಐ ಲವ್ ಯು'ಚಿತ್ರದ ಮುಖಾಂತರ ಮುಮೈತ್, ಕನ್ನಡದ ಪಡ್ಡೆಗಳಿಗೂ ಪರಿಚಿತೆ. ತೆಲುಗು ಮತ್ತು ತಮಿಳಿನಲ್ಲಿ ನಿರ್ದೇಶನ ಮಾಡಲು ಆಕೆ ಬಯಸಿದ್ದಾಳೆ. ಕನ್ನಡ ಪ್ರೇಕ್ಷಕರು ಸದ್ಯಕ್ಕೆ ಪಾರಾದರು ಅಂದರೇ, ಮುಮೈತ್ ಪ್ರೇಮಿಗಳು ಬೇಸರ ಮಾಡಿಕೊಳ್ಳಬಹುದು!
ಕಳೆದ ವಾರ 'ಮೈಸಮ್ಮ ಐಪಿಎಸ್'ತೆಲುಗು ಚಿತ್ರ ಬಿಡುಗಡೆಯಾಗಿ, ಆಂಧ್ರ ಬಾಕ್ಸಾಫೀಸಲ್ಲಿ ಸದ್ದು ಮಾಡಿದೆ. ಪವರ್ ಫುಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮುಮೈತ್ ನಟಿಸಿದ್ದು, ಈ ಚಿತ್ರ ತಮಿಳಿಗೂ ಡಬ್ ಆಗುತ್ತಿದೆ. ಈ ಹೊತ್ತಿನಲ್ಲಿ ನಟನೆ ಮತ್ತು ನಿರ್ದೇಶನದ ಹಂಬಲ ಮುಮೈತ್ ಮನದಲ್ಲಿ ಕಾರಂಜಿಯಂತೆ ಚಿಮ್ಮಿದೆ.
ತಮಿಳು ನಿರ್ದೇಶಕರನ್ನು ಆಕೆ ಸಂಪರ್ಕಿಸಿದ್ದು, ಒಳ್ಳೆ ಪಾತ್ರ ಮತ್ತು ಕತೆ ಸೃಷ್ಟಿಸುವಂತೆ ಕೋರಿದ್ದಾಳೆ. ನಟನಾ ಪ್ರತಿಭೆ ಹೊರಹಾಕುವ ಆಸೆ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ನಿರ್ದೇಶಕಿಯಾಗುವ ಅವರ ಇನ್ನೊಂದು ಬಹುದಿನದ ಮಹತ್ವಾಕಾಂಕ್ಷೆ ಬೆಳಕಿಗೆ ಬಂದಿದೆ. ಮುಮೈತ್ ಮಹತ್ವಾಕಾಂಕ್ಷೆಗೆ ನೀರೆರೆಯುವುದಾಗಿ ಮಸಾಲಾ ಚಿತ್ರಗಳ ಖ್ಯಾತಿಯ ನಿರ್ದೇಶಕ ಎ.ವೆಂಕಟೇಶ್ ಭರವಸೆ ಬೇರೆ ಸಿಕ್ಕಿದೆ.
ಮುಂದಿನ ವರ್ಷ ಕಮರ್ಷಿಯಲ್ ಚಿತ್ರ ನಿರ್ದೇಶಿಸಲು ನಾನು ಸಿದ್ಧತೆ ನಡೆಸಿದ್ದೇನೆ. ನನ್ನ ಅನುಭವಗಳ ಬಳಸಿಕೊಳ್ಳಲು ಇದು ಸಕಾಲ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿರುವ ನನ್ನ ಆಪ್ತರು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಒಳ್ಳೆ ನಿರ್ಮಾಪಕರು ಸಿಗದಿದ್ದರೇ, ನಿರ್ಮಾಪಕಿಯೂ ನಾನೇ ಆಗುತ್ತೇನೆ ಎಂದಿದ್ದಾರೆ ಮುಮೈತ್. ಆಕೆಗೆ ಒಳ್ಳೆಯದಾಗಲಿ.
(ದಟ್ಸ್ ಕನ್ನಡ ಸಿನಿ ವಾರ್ತೆ)