Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಟ್ಟದಾಸನಪುರದಲ್ಲಿ ಚಿರು ಸಾಹಸ
ತೆಲುಗಿನಲ್ಲಿ ನಾಗೇಶ್ವರರಾವ್ ಮೊಮ್ಮಗನೊಡನೆ ಕುಣಿದು ಬಂದಿರುವ ದೆಹಲಿ ಬೆಡಗಿ ಕೀರ್ತಿ, ಬೆಂಗಳೂರಿನ ಬಿಸಿಲಿಗೆ ಕೊಂಚ ಬಸವಳಿದಂತೆ ಕಂಡು ಬಂದರು. ಅರ್ಜುನ್ ಸರ್ಜಾರ ಅಳಿಯ ಯುವನಾಯಕ ಚಿರಂಜೀವಿ ಸರ್ಜಾ ಬಂಡೆಗಲ್ಲ ಮೇಲೆ ನಿಂತು ರೌಡಿಗಳೊಡಿಗೆ ಒಬ್ಬಂಟಿಯಾಗಿ ಹೋರಾಡುತ್ತಿದ್ದರು.
ದೃಶ್ಯದ ಹಿನ್ನೆಲೆ : ಶ್ರೀಮಂತರ ಮನೆಯ ಹುಡುಗಿ(ಕೃತಿ)ಯನ್ನು ಮಧ್ಯಮವರ್ಗದ ಹುಡುಗ(ಚಿರಂಜೀವಿ ಸರ್ಜಾ) ಪ್ರೀತಿಸಿದನೆಂದರೆ ಆ ಹುಡುಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹುಡುಗನಿಗೆ ಎಲ್ಲಾ ಕಷ್ಟಗಳನ್ನು ನಿಭಾಯಿಸುವ ಸಾಮರ್ಥ್ಯವಿದ್ದರೆ ಪ್ರೀತಿಗೆ ಜಯ ದೊರಕವುದು ಖಚಿತ.
ಚಿತ್ರದ ನಾಯಕನಿಗೆ ಗೃಹ ಮಂತ್ರಿಗಳ ಪುತ್ರಿಯೊಂದಿಗೆ ಪ್ರೇಮ ಆರಂಭವಾಗಿರುತ್ತದೆ. ಪ್ರೇಯಸಿಯ ಮನೆ ಕಡೆಯವರಿಂದ ಈ ಪ್ರೀತಿಗೆ ಪ್ರತಿರೋಧ ವ್ಯಕ್ತವಾಗಿರುತ್ತದೆ. ಆದರೆ ಇದನ್ನು ಧಿಕ್ಕರಿಸಿ ಇವರಿಬ್ಬರ ಪ್ರೇಮ ಸಾಗುತ್ತಿರುತ್ತದೆ. ಹೀಗೆ ಒಮ್ಮೆ ಈ ಯುವ ಪ್ರೇಮಿಗಳು ನಡೆದು ಬರುತ್ತಿದ್ದನ್ನು ಗಮನಿಸಿದ ನಾಯಕಿಯ ತಂದೆಯ ಕಡೆಯವರು ನಾಯಕನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾರೆ. ಬಂದ ಪಡೆಯೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸಿದ ನಾಯಕ ಅವರನ್ನೆಲ್ಲಾ ಮಟ್ಟ ಹಾಕುತ್ತಾನೆ.
ಈ ಸನ್ನಿವೇಶವನ್ನು ಸಾಹಸ ನಿರ್ದೇಶಕ ಪಳನಿರಾಜ್ ಅವರ ಸಾರಥ್ಯದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸಪುರದಲ್ಲಿ 'ಚಿರು' ಚಿತ್ರಕ್ಕಾಗಿ ಚಿತ್ರಿಸಿಕೊಳ್ಳಲಾಯಿತು. ನಾಯಕ ಚಿರಂಜೀವಿ ಸರ್ಜಾ, ನಾಯಕಿ ಕೃತಿ ಮುಂತಾದ ಕಲಾವಿದರು ಈ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಮಾರ್ಸ್ ಫಿಲಂಸ್ ಲಾಂಛನದಲ್ಲಿ ಸುರೇಶ್ಜೈನ್ ನಿರ್ಮಿಸುತ್ತಿರುವ 'ಚಿರು' ಚಿತ್ರವನ್ನು ಮಹೇಶ್ಬಾಬು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಸ್ವಾಮೀಜಿ ಕಥೆ, ಸುಂದರನಾಥಸುವರ್ಣ ಛಾಯಾಗ್ರಹಣ, ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ರವಿವರ್ಮ ಸಾಹಸ, ಮುರುಳಿ, ಹರ್ಷ ನೃತ್ಯ ಸಂಯೋಜನೆಯಿದೆ.