ಮಾತಿನ ಮನೆಯಲ್ಲಿ ಹೊಸ ಪ್ರತಿಭೆಗಳ ಗಗನಸಖಿ
ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿದ್ದುಕೊಂಡಿರುವ ಶಿವಕುಮಾರ್ ಇದುವರೆಗೂ 18 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಹಳ ದಿನಗಳ ಅಂತರದ ನಂತರ ಗಗನ ಸಖಿ ಎಂಬ ಮತ್ತೊಂದು ಚಿತ್ರವನ್ನು 2 ತಿಂಗಳ ಹಿಂದೆಯಷ್ಟೇ ಪ್ರಾರಂಭಿಸಿ ಚಿತ್ರೀಕರಣ ಮುಗಿಸಿದ್ದಾರೆ.
ಕಳೆದ ಗುರುವಾರದಿಂದ ಡಬ್ಬಿಂಗ್ ಕಾರ್ಯ ಕೂಡ ಪ್ರಾರಂಭವಾಗಿದೆ. ಮುಗ್ಧ ಯುವಕನೊಬ್ಬನ ಜೀವನದಲ್ಲಿ ದ್ವಂದ್ವ ವ್ಯಕ್ತಿತ್ವದ ಇಬ್ಬರು ಯುವತಿಯರ ಪ್ರವೇಶದಿಂದಾಗಿ ಉಂಟಾಗುವ ವೈಪರೀತ್ಯಗಳನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಸುಮಾರು 27 ದಿನಗಳ ಕಾಲ ಒಂದೇ ಹಂತದಲ್ಲಿ ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ಮಾಡಿ ಮುಗಿಸಲಾಗಿದ್ದು, ನಿರ್ದೇಶಕ ಶಿವಕುಮಾರ್ ಅವರೇ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.
ಉದ್ಯಮಿ ನಾಗರಾಜ ಅವರ ಜೊತೆ ರಾಮಾಂಜನೇಯ ಹಾಗೂ ರಾಮಚಂದ್ರಪ್ಪ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮುತ್ತುರಾಜ್ ಅವರ ಛಾಯಾಗ್ರಹಣ, ಗಂಧರ್ವ ಅವರ ಸಂಗೀತ ಸಂಯೋಜನೆ, ಸಿ.ವಿ. ಶಿವಶಂಕರ್, ಗಂಧರ್ವ, ಶಿವಪ್ರಸಾದ್, ಸುಮತಿ ಅವರ ಸಾಹಿತ್ಯ ಈ ಚಿತ್ರಕ್ಕಿದ್ದು, ಹೊಸ ಪ್ರತಿಭೆ ಡಾ. ಮಾಧವನ್, ಭವಾನಿ ಗಾಂಧಿ (ದ್ವಿಪಾತ್ರ), ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್, ಮಾರಿಮುತ್ತು, ಕರಿಬಸವಯ್ಯ, ಸುರೇಶ ದಾವಣಗೆರೆ, ವಿಜಯಕುಮಾರ ಪ್ರಮುಖ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications