twitter
    For Quick Alerts
    ALLOW NOTIFICATIONS  
    For Daily Alerts

    ಮಾತಿನ ಮನೆಯಲ್ಲಿ ಹೊಸ ಪ್ರತಿಭೆಗಳ ಗಗನಸಖಿ

    By Staff
    |

    ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿದ್ದುಕೊಂಡಿರುವ ಶಿವಕುಮಾರ್ ಇದುವರೆಗೂ 18 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಹಳ ದಿನಗಳ ಅಂತರದ ನಂತರ ಗಗನ ಸಖಿ ಎಂಬ ಮತ್ತೊಂದು ಚಿತ್ರವನ್ನು 2 ತಿಂಗಳ ಹಿಂದೆಯಷ್ಟೇ ಪ್ರಾರಂಭಿಸಿ ಚಿತ್ರೀಕರಣ ಮುಗಿಸಿದ್ದಾರೆ.

    ಕಳೆದ ಗುರುವಾರದಿಂದ ಡಬ್ಬಿಂಗ್ ಕಾರ್ಯ ಕೂಡ ಪ್ರಾರಂಭವಾಗಿದೆ. ಮುಗ್ಧ ಯುವಕನೊಬ್ಬನ ಜೀವನದಲ್ಲಿ ದ್ವಂದ್ವ ವ್ಯಕ್ತಿತ್ವದ ಇಬ್ಬರು ಯುವತಿಯರ ಪ್ರವೇಶದಿಂದಾಗಿ ಉಂಟಾಗುವ ವೈಪರೀತ್ಯಗಳನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಸುಮಾರು 27 ದಿನಗಳ ಕಾಲ ಒಂದೇ ಹಂತದಲ್ಲಿ ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ಮಾಡಿ ಮುಗಿಸಲಾಗಿದ್ದು, ನಿರ್ದೇಶಕ ಶಿವಕುಮಾರ್ ಅವರೇ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.

    ಉದ್ಯಮಿ ನಾಗರಾಜ ಅವರ ಜೊತೆ ರಾಮಾಂಜನೇಯ ಹಾಗೂ ರಾಮಚಂದ್ರಪ್ಪ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮುತ್ತುರಾಜ್ ಅವರ ಛಾಯಾಗ್ರಹಣ, ಗಂಧರ್ವ ಅವರ ಸಂಗೀತ ಸಂಯೋಜನೆ, ಸಿ.ವಿ. ಶಿವಶಂಕರ್, ಗಂಧರ್ವ, ಶಿವಪ್ರಸಾದ್, ಸುಮತಿ ಅವರ ಸಾಹಿತ್ಯ ಈ ಚಿತ್ರಕ್ಕಿದ್ದು, ಹೊಸ ಪ್ರತಿಭೆ ಡಾ. ಮಾಧವನ್, ಭವಾನಿ ಗಾಂಧಿ (ದ್ವಿಪಾತ್ರ), ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್, ಮಾರಿಮುತ್ತು, ಕರಿಬಸವಯ್ಯ, ಸುರೇಶ ದಾವಣಗೆರೆ, ವಿಜಯಕುಮಾರ ಪ್ರಮುಖ ತಾರಾಗಣದಲ್ಲಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Monday, March 2, 2009, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X