Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಡವಿಟ್ಟ ತಾಳಿ ಬಿಡಿಸಿಕೊಟ್ಟ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದರೆ ಹೀಗೇ ನೋಡಿ. ಬಲಗೈಲಿ ಮಾಡಿದ ಉಪಕಾರ ಎಡಗೈಗೆ ಗೊತ್ತಗದಂತೆ ಮಾಡಿರುತ್ತಾರೆ. ಆದರೆ ಅದು ಹೇಗೋ ಏನೋ ಅವರ ಉಪಕಾರ ಬುದ್ಧಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಶಿವಣ್ಣನ ಒಳ್ಳೆತನಕ್ಕೆ ಇದು ಮತ್ತೊಂದು ನಿದರ್ಶನವಿದು.
ಗಂಗಾವತಿ ತಾಲೂಕಿನ ಸ್ತ್ರೀಶಕ್ತಿ ಮಹಿಳೆಯರು ತಾಳಿ ಮಾರಿ ತಮ್ಮ ತಾಂಡದ ರಸ್ತೆಯನ್ನು ತಾವೇ ಅಭಿವೃದ್ಧಿಪಡಿಸಿಕೊಂಡಿದ್ದರು. ಈ ಘಟನೆಯಿಂದ ಸರಕಾರ ಮುಜುಗರಕ್ಕೀಡಾಗಿತ್ತು. ಬಳಿಕ ಕಣ್ಣು ತೆರೆದ ಸರಕಾರ ಈ ತಾಂಡಾದ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಕ್ಕೆ ಸೂಚಿಸಿತ್ತು.
ಈ ಸುದ್ದಿ ತಿಳಿದ ಶಿವಣ್ಣ ಅಡವಿಟ್ಟ ತಾಳಿ ಬಿಡಿಸಿಕೊಡಲು ಮುಂದಾದರು. ಈ ಸಂಬಂಧ ಅವರು ನೇರವಾಗಿ ಗಂಗಾವತಿಯ ಅರುಣೋದಯ ಸ್ತ್ರೀಶಕ್ತಿ ತಾಂಡಕ್ಕೆ ಭೇಟಿ ನೀಡಿದ್ದರು. ಅವರನ್ನು ನೋಡಲು ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಗಿತ್ತು. ಮಹಿಳೆಯರು ಅಡವಿಟ್ಟಿದ್ದ ರು.2 ಲಕ್ಷ ಮೌಲ್ಯದ ತಾಳಿ ಹಾಗೂ ಚಿನ್ನಾಭರಣಗಳ ಪೈಕಿ ರು.1 ಲಕ್ಷ ಮೌಲ್ಯದ ತಾಳಿ ಹಾಗೂ ಒಡವೆ ಬಿಡಿಸಿಕೊಟ್ಟರು.
ಗಂಗಾವತಿಯ ಚೆನ್ನಬಸವಸ್ವಾಮಿ ಪತ್ತಿನ ಸಹಕಾರಿ ಬ್ಯಾಂಕ್ ಗೆ ನಟ ಶಿವಣ್ಣ ಬಂದು ಅಲ್ಲಿ ಅಡವಿಟ್ಟ ತಾಳಿ ಬಿಡಿಸಿಕೊಳ್ಳುತ್ತಾರೆ ಎಂದು ಆಡಳಿತ ಮಂಡಳಿ ಕಾಯುತ್ತಿತ್ತು. ಹಾರ, ತುರಾಯಿಗಳೊಂದಿಗೆ ಶಿವಣ್ಣನ ಸ್ವಾಗತಕ್ಕೆ ತುದಿಗಾಗಲ್ಲಿ ಬ್ಯಾಂಕ್ ಅಧಿಕಾರಿಗಳು ಕಾಯುತ್ತಿದ್ದರು. ಅದರೆ ಶಿವಣ್ಣ ನೇರವಾಗಿ ಅರುಣೋದಯ ಕ್ಯಾಂಪಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಅರುಣೋದಯ ಕ್ಯಾಂಪಿನಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ತಮ್ಮ ನೆಚ್ಚಿನ ನಟನನ್ನು ನೋಡಲು ಇಲ್ಲಿನ ಕೋಟ್ನೆಕಲ್ ಗ್ರಾಮದಲ್ಲಿ ಅಭಿಮಾನಿಗಳು ಮುತ್ತಿದ್ದರಿಂದ ಶಿವಣ್ಣ ಕಾರಿನಿಂದಿಳಿದು ಮಾಲಾರ್ಪಣೆ ಸ್ವೀಕರಿಸಿದರು.
ಬಳಿಕ ಮಾಜಿ ಸಂಸದ ಎಚ್ ಜಿ ರಾಮುಲು ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ವರನಟ ಡಾ.ರಾಜ್ ಅವರ ಸಂಬಂಧಿಕರಾದ ಎಚ್ ಜಿ ರಾಮುಲು ಅವರ ಯೋಗ ಕ್ಷೇಮ ವಿಚಾರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಆರ್ ಶ್ರೀನಾಥ್ ಅವರ ಯೋಗಕ್ಷೇಮವನ್ನು ವಿಚಾರಿಸಿದರು.