Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ ನಾರಾಯಣನ ಚಂದ್ರಮ ಚಿತ್ರಕ್ಕೆ ಸಿಕ್ಕ ಖಳ
ಹಲವು ಚಿತ್ರಗಳ ಸೋಲುಗಳಿಂದ ಕಂಗೆಟ್ಟಿರುವ ಕಲಾ ಸಾಮ್ರಾಟ್ ಎಸ್ .ನಾರಾಯಣ್ ಈ ಬಾರಿ ವಿಶೇಷ ಆಸಕ್ತಿವಹಿಸಿ ಚಿತ್ರ ಮಾಡುತ್ತಿದ್ದಾರೆ. ಚೆಲುವಿನ ಚಿತ್ತಾರದ ಬಾಲೆ ಅಮೂಲ್ಯಳಿಗೆ ಮತ್ತೊಂದು ಅವಕಾಶ ನೀಡಿ. ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಿದ ನಾಣಿ ಸಾಹೇಬ್ರು. ಚಿತ್ರಕ್ಕೆ "ಚೈತ್ರದ ಚಂದ್ರಮ' ಎಂಬ ಆಕರ್ಷಕ ಹೆಸರನ್ನಿಟ್ಟಿದ್ದಾರೆ.
ನಾಯಕಿಯ ಆಯ್ಕೆಯನ್ನು ಸರಾಗವಾಗಿ ಮಾಡಿದ ನಾರಾಯಣ್, ಎಚ್ಚರಿಕೆಯ ಗತಿಯಲ್ಲಿ ಉಳಿದ ತಾರಾಗಣದ, ತಂತ್ರಜ್ಞರ ಆಯ್ಕೆಯಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರಕ್ಕೆ ನಾಯಕನ ಯಾರು ಎಂಬ ಬಗ್ಗೆ ಗಾಂಧಿನಗರಕ್ಕೆ ಕುತೂಹಲ ಮೂಡಿಸಿದ್ದರು. ಕಡೆಗೆ ತಮ್ಮ ಪುತ್ರನನ್ನೇ ಹೀರೋ ಮಾಡಿದ್ದಾರೆ. ಈ ಮುಂಚೆ 'ವೀರು' ಚಿತ್ರದಲ್ಲಿ ನಟಿಸಿದ ಅನುಭವವಿರುವ ನಾರಾಯಣ್ ಅವರ ಮಗ ಪಂಕಜ್ ಅವರು ಅಮೂಲ್ಯ ಜತೆ ನಟಿಸಲು ಸಿದ್ಧರಾಗಿದ್ದಾರೆ.
ಈಗ ಹೀರೋಗೆ ತಕ್ಕ ವಿಲನ್ ಹುಡುಕಾಟದಲ್ಲಿ ತೊಡಗಿದ್ದಾರೆ. ಹಿರಿಯ ವಿಲನ್ ಗಳನ್ನು ಹಾಕಿಕೊಂಡರೆ, ಹೊಂದಾಣಿಕೆಯಾಗುವುದಿಲ್ಲ ಎಂಬ ಲೆಕ್ಕಾಚಾರ ಹಾಕಿ ನಿರ್ದೇಶಕ ಪಿ.ಎನ್ .ಸತ್ಯಾ ಅವರನ್ನು ಖಳನಾಯಕನಾಗಿ ನಟಿಸಲು ಆಹ್ವಾನವಿತ್ತಿದ್ದಾರೆಂದು ಸುದ್ದಿ ಬಂದಿದೆ.
ದರ್ಶನ್ ಅವರಿಗೆ ರೌಡಿಸಂ ಇಮೇಜ್ ಹುಟ್ಟು ಹಾಕಿ ಹಲವು ಬ್ರೇಕ್ ನೀಡಿ, ಗೂಳಿ ಮೂಲಕ ಸುದೀಪ್ ಅವರನ್ನು ಮತ್ತೆ ಗೆಲುವಿನ ಟ್ರಾಕ್ ಗೆ ಕರೆತಂದ ಕೀರ್ತಿ ಹೊಂದಿರುವ ಪಿ.ಎನ್ .ಸತ್ಯಾ ಅವರು ನಿರ್ದೇಶನದ ಜತೆಗೆ ನಟನೆಯಲ್ಲೂ ಕೂಡ ವಿಭಿನ್ನ ರೀತಿಯ ವಿಲನ್ ಆಗಿ ಜನಮೆಚ್ಚಿಗೆ ಗಳಿಸಿರುವುದೇನೋ ಸತ್ಯ. ಆದರೆ ಕಲಾ ಸಾಮ್ರಾಟರ ಚಿತ್ರದಲ್ಲಿ ಅವ್ರ ಮಗನ ಕೈಲಿ ಒದೆ ತಿನ್ನುತ್ತಾರಾ ಎಂಬುದು ಇನ್ನು ಪ್ರಶ್ನೆಯಾಗಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)