Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಜ್ಞಾತವಾಸದಿಂದ ಎದ್ದುಬಂದ ಆ ದಿನಗಳು ಚೇತನ್
ಆ ದಿನಗಳು ಚೇತನ್ ಎಲ್ಲಿ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ಕಡೆಗೂ ಉತ್ತರ ಸಿಕ್ಕಿದೆ. ಇಷ್ಟು ದಿನ ಅವರು ಎಲ್ಲಿ ಹೋದರು ಎಂಬ ಪ್ರಶ್ನೆ ಕಾಡುತ್ತಿತ್ತು. ಚೇತನ್ ಈಗ 'ಬಿರುಗಾಳಿ'ಯಂತೆ ಚಿತ್ರ ನಿರ್ದೇಶಕನಾಗಿ ಹೊಸ ಅವತಾರದಲ್ಲಿ ಮರಳಿದ್ದಾರೆ. ಈ ಮೂಲಕ ಚೇತನ್ ನಟನೆಯಿಂದ ನಿರ್ದೇಶನಕ್ಕೆ ಮುಂಬಡ್ತಿ ಪಡೆದಂತಾಗಿದೆ.
ಕತೆ, ಚಿತ್ರಕತೆ ಸಿದ್ಧಪಡಿಸಿಕೊಳ್ಳಲು ಚೇತನ್ ಇಷ್ಟು ದಿನ ಅಜ್ಞಾತವಾಸದಲ್ಲಿದ್ದರು. ಈಗ ಚಿತ್ರಕತೆ ಸಿದ್ಧವಾಗಿದ್ದು ಅಜ್ಞಾತವಾಸದಿಂದ ಎದ್ದು ಬಂದಿದ್ದಾರೆ. ಚಿತ್ರಕತೆ ರಚನೆಗೆ ಕರಿಷ್ಮ ಭಾರದ್ವಾಜ್ ಎಂಬುವವರು ಚೇತನ್ಗೆ ಸಾಥ್ ನೀಡಿದ್ದಾರೆ.
ಆಕ್ಷನ್, ಕಟ್ ಹೇಳುವುದರ ಜೊತೆಗೆ ಸ್ವತಃ ನಟಿಸಲಿದ್ದಾರೆ ಚೇತನ್. ನಾಯಕಿ ಪಾತ್ರಕ್ಕೆ ಐಂದ್ರಿತಾ ರೇ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೆ ನಡೆಯಬೇಕಾಗಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕ್ಕಿರುತ್ತದೆ.
ಈ ಚಿತ್ರವನ್ನು ಕಾನ್ಫಿಡೆಂಟ್ ಗ್ರೂಫ್ ನಿರ್ಮಿಸುತ್ತಿದ್ದು ಶೀಘ್ರದಲ್ಲೆ ವಿವರಗಳನ್ನು ತಿಳಿಸುವುದಾಗಿ ಚೇತನ್ ಹೇಳಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸದಂತೆ ಫೆಬ್ರವರಿ 12ರಂದು ವಿವರಗಳನ್ನು ನೀಡಲಿದ್ದಾರೆ. ಅಲ್ಲಿಯವರೆಗೂ ವೇಟ್ ಅಂಡ್ ವಾಚ್.