Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಕರ್ ಬಿದರಿಗೆ ನಟಿ ಪೂಜಾಗಾಂಧಿ ದೂರು!
ಛಾಯಾ ಪತ್ರಕರ್ತರ ಸಂಘ ಬುಧವಾರ ಚಿತ್ರಕಲಾ ಪರಿಷತ್ತಿನಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ವಿಶೇಷ ಅತಿಥಿಗಳಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ಮತ್ತು ನಟಿ ಪೂಜಾಗಾಂಧಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬಿದರಿ ಅವರ ಬಳಿನಟಿ ಪೂಜಾಗಾಂಧಿ ತಮ್ಮದೊಂದು ಅಹವಾಲನ್ನು ಸಲ್ಲಿಸಿದರು.
ಸರ್, ದಯವಿಟ್ಟು ಉನ್ನತ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಕೊಡಿ ಎಂದು ಪೂಜಾಗಾಂಧಿ ಕೇಳುವ ಮೂಲಕ ಬಿದರಿ ಅವರನ್ನು ಕ್ಷಣ ಕಾಲ ತಬ್ಬಿಬ್ಬುಗೊಳಿಸಿದರು. ನಮ್ಮ ಏರಿಯಾದಿಂದ ಪೊಲೀಸರಿಗೆ ದೂರು ಕೊಡಲು ಕರೆ ಮಾಡಿದರೆ ಅವರು ಕ್ಷಿಪ್ರವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರು ಪೂಜಾಗಾಂಧಿ ಅವರದು.
ತಕ್ಷಣ ಪ್ರತಿಕ್ರಿಯಿಸಿದ ಬಿದರಿ ಸಾಹೇಬರು, ನಿಮ್ಮ ಯಾವುದೇ ಸಮಸ್ಯೆಯನ್ನು ಪತ್ರಮುಖೇನ ತಿಳಿಸಿ. ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನಿಜ ಜೀವನದಲ್ಲಿ ಪೂಜಾಗಾಂಧಿ ಚಿಕ್ಕವರಲ್ಲ.ತೆರೆಯ ಮೇಲೆ ಮತ್ತು ಪತ್ರಿಕೆಗಳಲ್ಲಿ ಅವರನ್ನು ಮತ್ತಷ್ಟು ದೊಡ್ಡವರಾಗಿ ತೋರಿಸುವ ಜಬಾಬ್ದಾರಿ ನಿಮ್ಮದು ಎಂದು ಪತ್ರಕರ್ತರಿಗೆ ಬಿದರಿ ಹೇಳಿದರು.
ನಂತರ ಬಿದರಿ ಮತ್ತು ಪೂಜಾ ಚಿತ್ರ ಪ್ರದರ್ಶನದಲ್ಲಿ ತಲ್ಲೀನರಾದರು. ತಮ್ಮದೇ ಛಾಯಾಚಿತ್ರವನ್ನು ನೋಡಿದ ಬಿದರಿ, ನಾನು ತುಂಬಾ ದಢೂತಿ ಮನುಷ್ಯ. ಛಾಯಾಚಿತ್ರಗಳಲ್ಲಿ ನನ್ನನ್ನು ತುಂಬ ಸಣ್ಣದಾಗಿ ತೋರಿಸಿದ್ದೀರಿ ಎಂದು ಛಾಯಾಗ್ರಾಹಕರ ಬಳಿ ಬಿದರಿ ದೂರಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)