ಕಾಂಡೋಮ್ ಹೇಳಿಕೆಯ ರಹಸ್ಯ ಬಿಚ್ಚಿಟ್ಟ ಮುನಿರತ್ನ
"ಕಾಂಡೋಮ್ ಒಂದನ್ನು ಬಿಟ್ಟು ಹೀರೋಗಳು ಮಿಕ್ಕೆಲ್ಲವನ್ನೂ ನಿರ್ಮಾಪಕರಿಂದ ಪೀಡಿಸಿ ಕಿತ್ತುಕೊಳ್ಳುತ್ತಾರೆ" ಎಂಬ ಮುನಿರತ್ನರ ಮಾತಿನ ಹಿಂದಿನ ಮರ್ಮ ಈಗ ಬಯಲಾಗಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ತಾವು ಹಾಗೆ ಹೇಳಲು ಕಾರಣವನ್ನು ಮೊದಲಬಾರಿಗೆ ಮಾಧ್ಯಮದ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಅವರ ಪ್ರಕಾರ "ಕನ್ನಡದ ಬಹುತೇಕ ನಿರ್ಮಾಪಕರು ನನ್ನ ಬಳಿ ಬಂದು ತಮ್ಮ ಸಂಕಟ ತೋಡಿಕೊಳ್ಳುತ್ತಾರೆ. ಹೀರೋಗಳು ತಮಗೆ ಕೊಟ್ಟಿರುವ ಕಾಟ ಮತ್ತು ಅವರಿಂದ ಬಂದ ಬೇಡಿಕೆಗಳ ಪಟ್ಟಿಯನ್ನು ಮುನಿರತ್ನ ಮುಂದಿಡುವ ನಿರ್ಮಾಪಕರುಗಳು ಹೀರೋಗಳಿಂದಲೇ ತಾವು ಮನೆ ಮಾರಿಕೊಂಡು ಬೀದಿಗೆ ಬಿದ್ದಿರುವುದರ ಬಗ್ಗೆ ಹೇಳಿಕೊಳ್ಳುತ್ತಾರೆ.
ಅವರು ಗೋಳೋ ಎಂದು ಅಳುವುದನ್ನು ನೋಡಿ ನನಗೆ ಹೀರೋಗಳ ಮೇಲೆ ಸರಕ್ಕನೆ ಕೋಪ ಬಂದುಬಿಡುತ್ತದೆ. ಅದಕ್ಕೇ ತಕ್ಷಣ ಈ ರೀತಿಯೆಲ್ಲ ಪ್ರತಿಕ್ರಿಯಿಸಿಬಿಡುತ್ತೇನೆ. ರೈತ ದೇಶದ ಬೆನ್ನೆಲುಬು ಅನ್ನುವಂತೆ ನನ್ನ ಪ್ರಕಾರ ನಿರ್ಮಾಪಕ ಚಿತ್ರರಂಗದ ಬೆನ್ನೆಲುಬು. ದಯವಿಟ್ಟು ಅವರ ಬಗ್ಗೆ ಸಹಾನುಭೂತಿ ಇಡಿ. ನಿರ್ಮಾಪಕರನ್ನು ಉಳಿಸುವ ಕಡೆಗೆ ನಮ್ಮ ನಾಯಕನಟರು ಗಮನ ಹರಿಸಬೇಕು. ಮುಂದಿನ ಪುಟ ನೋಡಿ...


Click it and Unblock the Notifications











