Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ ತಮಿಳಿನ ಸೂಪರ್ ಹಿಟ್ ಚಿತ್ರ ರೇಣಿಗುಂಟ
'ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ಚಿತ್ರದ ನಾಯಕ ನಟ. ನಾಯಕಿಯ ಹುಡುಕಾಟ ನಡೆಯುತ್ತಿದೆ. ಹೊಸಬರಾದಂತಹ ಕೀರ್ತನ್ ಜೋಸೆಫ್ (ಡ್ರಮ್ಮರ್ ದೇವ ಪುತ್ರ) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಪ್ರೇಕ್ಷಕರ ಮನೋಭಾವಕ್ಕೆ ತಕ್ಕಂತೆ ಮೂಲ ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸದೆ, ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಜೋಸೆಫ್ ತಿಳಿಸಿದ್ದಾರೆ.
ಒಟ್ಟು 60 ದಿನಗಳ ಕಾಲ ಮಂಡ್ಯ, ಕೋಲಾರ, ಹುಬ್ಬಳ್ಳಿ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ. ಮೇ 3ರಂದು ಚಿತ್ರದ ಮುಹೂರ್ತ. ಚಿತ್ರದಲ್ಲಿ ನಾಯಕನಿಗೆ ಸಾಥ್ ನೀಡುವ ಜೈಲುವಾಸಿ ಗೆಳೆಯ ತೀಪೆಟ್ಟಿ ಗಣೇಶ್ ಇಲ್ಲಿ 'ಕಡ್ಡಿಪೆಟ್ಟಿಗೆ ಗಣೇಶ್' ಆಗಿ ಕನ್ನಡದಲ್ಲೂ ಅಭಿನಯಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕಿಗೆ ಮಾತೇ ಬರುವುದಿಲ್ಲ. ಆಕೆಯದು ಮುಗ್ಧ ಮೂಕಿಯ ಪಾತ್ರ. ಆಕೆಯ ಸಹೋದರನೇ ವೇಶ್ಯಾವಾಟಿಕೆಗೆ ತಳ್ಳುವ ಕರುಣಾಜನಕ ಕಥೆಯನ್ನು ಒಳಗೊಂಡಿದೆ. ಮಂಜುನಾಥ್ ಗೌಡ ಹಾಗೂ ವೆಂಕಟೇಶ್ ಗೌಡ ಚಿತ್ರದ ನಿರ್ಮಾಪಕರು. ಸೈಕೋ ಖ್ಯಾತಿಯ ಸಭಾ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಚರಣ್ ಮತ್ತು ಜಾಬ್ ಎಂಬಿಬ್ಬರು ಸಂಗೀತಧಾರೆ ಎರೆಯುತ್ತಿದ್ದಾರೆ. (ಏಜೆನ್ಸೀಸ್)