Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಂಬಾಣಿ ಚಿತ್ರಕ್ಕೆ ಸ್ಫೂರ್ತಿಯಾದ ಟೆಕ್ಕಿಗಿರೀಶ್ ಕೊಲೆ
ಅಂದಹಾಗೆ, ಇದು ಲಂಬಾಣಿ(ಬಂಜಾರ) ಭಾಷೆಯ ಚಿತ್ರ. ಇದರ ಹೆಸರು. 'ಏಕ್ ಛೋರೀರೊ ಸಾಕಿ".ಚಿತ್ರದ ನಾಯಕಿ/ಖಳನಾಯಕಿಯಾಗಿ ಶುಭಾ ಪಾತ್ರದಲ್ಲಿ ಓಂ ಪ್ರಕಾಶ್ ನಾಯಕ್ ಅವರ ಪತ್ನಿ ಅನುಪಮಾ ನಟಿಸುತ್ತಿರುವುದು ವಿಶೇಷ.
ಸಂಪೂರ್ಣ ಲಂಬಾಣಿ ತಾಂಡಾಗಳ ಜನಜೀವನವನ್ನು ಪ್ರತಿಬಿಂಬಿಸುವ ಈ ಚಿತ್ರ 'ಏಕ್ ಛೋರೀರೊ ಸಾಕಿ' (ಒಂದು ಹುಡುಗಿಯ ಕಥೆ). ಪ್ರಾಣಕ್ಕಿಂತ ಹೆಚ್ಚಾಗಿ ಒಬ್ಬನನ್ನು ಪ್ರೀತಿಸಿ ಮತ್ತ್ತೊಬ್ಬನ ಕೈಲಿ ತಾಳಿ ಕಟ್ಟಿಸಿಕೊಳ್ಳಬೇಕಾದ ಪ್ರಸಂಗ ಎದುರಿಸುವ ಹುಡುಗಿಯ ಮನಸ್ಥಿತಿಯ ಬಗ್ಗೆ ಚಿತ್ರಣ ನೀಡಲಿದೆಯಂತೆ.
ಕುಟುಂಬದವರ ಒತ್ತಾಯಕ್ಕೆ ಮಣಿದು ನಿಶ್ಚಿತಾರ್ಥಕ್ಕೆ ತಯಾರಾದ ಹುಡುಗಿಯ ಮನಸ್ಸನ್ನು ಅರಿಯದೆ ಕುಟುಂಬದವರು ಹೇಗೆ ಅವರ ಜೀವನವನ್ನು ಹಾಳುಗೆಡವುತ್ತಾರೆ. ಮುಂದೆ ಇದರಿಂದ ಬೇಸತ್ತು ತನ್ನ ಪ್ರಿಯಕರನ ಸಹಾಯ ಬೇಡಿ, ಭಾವಿ ಪತಿಯನ್ನು ಏಕೆ ಕೊಲೆ ಮಾಡುತ್ತಾಳೆ ಎಂಬುದೇ ಚಿತ್ರಕಥೆಯ ಸಾರ ಎನ್ನುತ್ತಾರೆ ನಿರ್ದೇಶಕ ಓಂಪ್ರಕಾಶ್.
ಬೆಂಗಳೂರು ಹಾಗೂ ಶಿವಮೊಗ್ಗ ಸುತ್ತಮುತ್ತಲ ತಾಂಡಾಗಳಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಿಶಿ ಸಂಗೀತ ನೀಡಿದ್ದಾರೆ. ಇರುವ ಎರಡು ಗೀತೆಗಳನ್ನು ನಿರ್ದೇಶಕರೇ ರಚಿಸಿದ್ದಾರೆ.
ನಿರ್ಮಾಪಕಿ ಲಲಿತಾನಾಯಕ್ ಅವರ ಮನೆಯಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ಕನ್ನಡಪರ ಹೋರಾಟಗಾರ ವಾಟಾನಾಗರಾಜ್ ಚಿತ್ರಕ್ಕೆ ಶುಭ ಹಾರೈಸಿ 'ಕ್ಲಾಪ್" ಮಾಡಿದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಓಂಪ್ರಕಾಶ್ ಬರೆದಿರುವ 'ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ" ಪುಸ್ತಕವನ್ನು ವಾಟಾಳ್ ಬಿಡುಗಡೆ ಮಾಡಿದರು.