twitter
    For Quick Alerts
    ALLOW NOTIFICATIONS  
    For Daily Alerts

    ವರ್ಷಧಾರೆಯಲ್ಲಿ ಬ್ರಹ್ಮಚಾರಿ ಹೋದ ಜಾರಿ

    By Staff
    |

    Varshadhare Hero Mithun Tejaswi
    ಚಿತ್ರಸಾಹಿತಿ ಡಾ.ನಾಗೇಂದ್ರಪ್ರಸಾದ್ ಅವರ ಅಂದಿನ ಪ್ರಸಿದ್ದ ಹಾಡು 'ಬೇಡ ನಂಬಬೇಡ' ಎಂಬ ಗೀತೆ ನೆನಪಾಗುವಂತೆ ತಮ್ಮದೇ ಶೈಲಿಯಲ್ಲಿ ಬ್ರಹ್ಮಚಾರಿಯನ್ನು ಅಕ್ಷರಗಳಿಂದ ಅಂಲಂಕರಿಸಿದ್ದಾರೆ. ಪಿ.ರಾಮಸ್ವಾಮಿ ಹಾಗೂ ಸಂಧ್ಯಾವೆಂಕಟೇಶ್ ನಿರ್ಮಿಸುತ್ತಿರುವ 'ವರ್ಷಧಾರೆ' ಚಿತ್ರಕ್ಕೆ ನಾಗೇಂದ್ರ ಪ್ರಸಾದ್.

    'ಮಹಾಬ್ರಹ್ಮಚಾರಿ ಹೋದಹೋದ ಜಾರಿ'ಎಂಬ ಗೀತೆಯನ್ನು ರಚಿಸಿದ್ದಾರೆ. ರಾಮು ನೃತ್ಯನಿರ್ದೇಶನದಲ್ಲಿ ಕಾರವಾರ, ಅಂಕೋಲ, ಕುಮುಟಾ ಸುತ್ತಮುತ್ತ ಚಿತ್ರೀಕೃತವಾದ ಈ ಗೀತೆಗೆ ಸೂರಜ್ ಹಾಗೂ ಪಾಯಲ್‌ಘೋಷ್ ಹೆಜ್ಜೆಹಾಕಿದ್ದನ್ನು ನಿರ್ದೇಶಕ ವೇಮಗಲ್‌ಜಗನ್ನಾಥ್‌ರಾವ್ ಚಿತ್ರೀಕರಿಸಿಕೊಂಡರು. ನಿರ್ದೇಶಕರು ವೆಂಕಟೇಶ್ ಅವರೊಡಗೂಡಿ ಚಿತ್ರಕ್ಕೆ ಕತೆ ರಚಿಸಿದ್ದಾರೆ.

    ದೇವರಾಜ್ ಛಾಯಾಗ್ರಹಣವಿರುವ 'ವರ್ಷಧಾರೆ'ಗೆ ಅಜನೀಶ್‌ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್‌ತೇಜಸ್ವಿ, ಸೂರಜ್, ಪಾಯಲ್‌ಘೋಷ್, ಆಶಿಟ್ಯಾಗೂರ್, ರಾಂಪ್ರಸಾದ್, ಸಂತೋಷ್, ನಿಶಾ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.ವರ್ಷಧಾರೆಗೆ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಸಹ ಹಾಡುಗಳನ್ನು ರಚಿಸಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Tuesday, December 2, 2008, 12:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X