Don't Miss!
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಿತಾ ಸ್ಥಾನವನ್ನು ಸಂಜನಾ ಮೇಡಂ ಮಾತ್ರ ತುಂಬಬಲ್ಲರು!
ಬಾಲಿವುಡ್ನ ಮಲ್ಲಿಕಾ ಶೆರಾವತ್ ಸಹಾ ನಾಚುವಂತೆ ತುಟಿಯನ್ನು ಬಟ್ಟಳನ್ನಾಗಿಸಿ, ಚುಂಬನ ದೃಶ್ಯದಲ್ಲಿ ಪಾಲ್ಗೊಂಡಿದ್ದ ಸಂಜನಾ, ‘ಗಂಡ ಹೆಂಡತಿ’ ಚಿತ್ರದ ನಂತರ ಸ್ಯಾಂಡಲ್ವುಡ್ನಲ್ಲಿ ತಮಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತದೆ ಎಂದು ನಂಬಿದ್ದರು. ವಿಪರ್ಯಾಸವೆಂದರೆ, ಕನ್ನಡದ ಪ್ರೇಕ್ಷಕರು ಚುಂಬನ ಕನ್ಯೆಯನ್ನು ಒಪ್ಪಿದರು... ಚಿತ್ರವನ್ನು ಒಪ್ಪಲಿಲ್ಲ...!
ಹೀಗಾಗಿ ತಮ್ಮ ಎಂದಿನ ಮಾಡೆಲಿಂಗ್ ರಂಗದಲ್ಲಿ ತೊಡಗಿಸಿಕೊಂಡರು. ಈ ಮಧ್ಯೆತೆಲುಗು-ತಮಿಳಲ್ಲೂ ಅವಕಾಶಗಳು ಬರುತ್ತಿವೆ. ಕನ್ನಡಿಗರು ಸಂಜನಾರನ್ನು ಮರೆತರು ಎನ್ನುವಾಗಲೇ ಸುದೀಪ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅವರೀಗ ಕೆಂಪೇಗೌಡ ಚಿತ್ರದ ನಾಯಕಿ. ಫೆಬ್ರವರಿ ಮೊದಲವಾರದಲ್ಲಿ ಚಿತ್ರ ಸೆಟ್ಟೇರಲಿದೆ.
ಚಿತ್ರದ ನಿರ್ದೇಶಕ ಓಂ ಪ್ರಕಾಶ್ ಪ್ರಕಾರ, ಸಂಜನಾಗೆ ಈ ಚಿತ್ರದಿಂದ ಒಳ್ಳೆ ಹೆಸರು ಬರಲಿದೆಯಂತೆ. ಸ್ಯಾಂಡಲ್ವುಡ್ನ ಸುಂಟರಗಾಳಿ ರಕ್ಷಿತಾ, ಮದುವೆ-ಮನೆ-ಮಕ್ಕಳು ಎಂಬ ಗುಂಗಿನಲ್ಲಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಾರೆ. ಅವರಿಂದ ತೆರವಾಗಿರುವ ಸ್ಥಾನವನ್ನು ಸಂಜನಾ ಸಮರ್ಥವಾಗಿ ತುಂಬಬಲ್ಲಳು ಎಂಬ ವಿಶ್ವಾಸ ಓಂ ಪ್ರಕಾಶ್ ಅವರಿಗಿದೆ.