ಚಂದ್ರಚಕೋರಿ ಮುರಳಿಯ ‘ಕಂಠಿ’

ಕಂಠಿ ಚಿತ್ರವನ್ನು ಕನಕಪುರ ಶ್ರಿನಿವಾಸ್ ನಿರ್ಮಿಸುತ್ತಿದ್ದಾರೆ. ಇದು ಮುರಳಿಗೆ ಎರಡನೆ ಚಿತ್ರವಾದರೆ ನವ ನಿರ್ದೇಶಕ ಭರತ್ಗೆ ಮೊದಲ ಚಿತ್ರ. ಚಿತ್ರಕ್ಕೆ 'ಅಭಿ" ಖ್ಯಾತಿಯ ರಮ್ಯಾ ನಾಯಕಿ. ಚಿತ್ರದ ವಿಭಿನ್ನತೆ ಎಂದರೆ 80ರ ದಶಕದ ಶೈಲಿಯ ಐಟಂ ಡ್ಯಾನ್ಸ್ . ಇದಕ್ಕೆ ನೆರೆಯ ತೆರೆಯ ನೃತ್ಯಗಾರ್ತಿ ಮಮ್ತಾಜ್ ಮೈ-ಕೈ ಬಳುಕಿಸಲಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ಕ್ಯಾಬರೆ ನರ್ತಕಿಯರು ಸ್ಲಿಮ್-ಟ್ರಿಮ್ ಆಗಿರುತ್ತಾರೆ. ಆದರೆ ಕನ್ನಡದಲ್ಲಿ ಗಜಗಾಮಿನಿಯರನ್ನೇ ಬಳಸುತ್ತಾರಲ್ಲ ? ನಮ್ಮ ನಿರ್ಮಾಪಕರ ಹೃದಯ ವಿಶಾಲವಾಗಿದೆಯಲ್ಲ !
ಬಾಲಿವುಡ್ ನಟ ಗೋವಿಂದ ನಾಮದೇವ್ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಛಾಯಾಗ್ರಹಣ ವೇಣು ಅವರದ್ದು. ಗುರುಕಿರಣ್ ಸಂಗೀತ ನೀಡಿದ್ದಾರೆ. ಚಿತ್ರತಂಡ ಈಗಾಗಲೇ ಬೆಳಗಾಂನಲ್ಲಿ ಚಿತ್ರೀಕರಣ ಮುಗಿಸಿ ಕೊಂಡು ಬಂದಿದೆ. ಚಿತ್ರಕತೆಯು ಮರಾಠಿ ಮತ್ತು ಕನ್ನಡದ ಮಧ್ಯೆ ಭೇದ ಯಾಕೆ ? ಎಂಬ ಕುರಿತು ಮಾತನಾಡಲಿದೆಯಂತೆ. ಆದಕ್ಕಾಗಿ ಶೂಟಿಂಗ್ ಬೆಳಗಾಂನಲ್ಲಿ ನಡೆದಿದೆ.
ಮುರಳಿಗೆ ಈ ಚಿತ್ರದ ಬಗ್ಗೆ ತುಂಬಾ ಭರವಸೆಯಿದೆ. ಚಿತ್ರಕತೆ ವಿಭಿನ್ನವಾಗಿದೆ. ಆದ್ದರಿಂದ ಯಶಸ್ಸು ಖಂಡಿತವಾಗಿಯೂ ಇದೆ ಎನ್ನುತ್ತಾರೆ. ನೀ ನಡೆವ ಹಾದಿಯಲ್ಲಿ ಯಶಸ್ಸೇ ಸಿಗಲಿ ಎಂದು ಮುರಳಿಗೆ ಹಾರೈಸೋಣವೇ...


Click it and Unblock the Notifications