Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಣ್ಣದಲೋಕಕ್ಕೆ ಮಂಡ್ಯದ ಗಂಡು ರೀಎಂಟ್ರಿ
*ದಟ್ಸ್ಕನ್ನಡ ಬ್ಯೂರೋ
‘ಅರ್ಜುನ್ ಸರ್ಜಾ ತಮಿಳಿನಲ್ಲಿ ಹೀರೋ ಆದಾಗ ಅವರ ತಂದೆ ಶಕ್ತಿ ಪ್ರಸಾದ್ ಮಗನಿಗೆ ಕಾರು ಕೊಡಿಸಬೇಕು ಅಂತ ಬಯಸಿದರು. ಆಗ ಅವರ ಹತ್ತಿರ ಅಷ್ಟೊಂದು ಹಣವಿರಲಿಲ್ಲ. ನನ್ನ ಸಹಾಯ ಕೇಳಿದರು. ಕೊಟ್ಟೆ. ಅರ್ಜುನ್ ಸರ್ಜಾ ಬೆಂಗಳೂರಿಗೆ ಬಂದಾಗ ಅಂದುಕೊಂಡಂತೆ ಕಾರನ್ನೂ ಕೊಟ್ಟರು. ಆದರೆ, ಅದಾದ ನಂತರ ಅವರು ಹೆಚ್ಚು ದಿನ ಬದುಕಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಅರ್ಜುನ್, ಅವರಪ್ಪ ಇಸಿದುಕೊಂಡಿದ್ದ ಹಣವನ್ನು ಕೊಡೋಕೆ ಬಂದರು. ನಾನು ಇರಲಿ, ಅದೆಲ್ಲ ಮರೆತು ಬಿಡು ಅಂತ ಎಷ್ಟೋ ಹೇಳಿದೆ. ಅರ್ಜುನ್ ಕೇಳಲಿಲ್ಲ. ಅಪ್ಪನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀವು ದುಡ್ಡನ್ನು ತೆಗೆದುಕೊಳ್ಳಲೇಬೇಕು ಅಂತ ಪಟ್ಟು ಹಿಡಿದ. ವಿಧಿಯಿಲ್ಲದೆ ತೆಗೆದುಕೊಂಡೆ. ಎಂಥ ಅಪ್ಪ... ಎಂಥ ಮಗ.. !’
ಅಂಬರೀಶ್ ಲೋಕಾಭಿರಾಮ ಮಾತಾಡುತ್ತಿದ್ದರು. ಫಾರ್ ಎ ಚೇಂಜ್ ರಾಜಕಾರಣದ ವಿಚಾರ ಬಿಟ್ಟು, ಬಣ್ಣ ಲೋಕದ ಮಜಾಗಳ ಮೆಲುಕು ಹಾಕುತ್ತಿದ್ದರು. ದರ್ಶನ್ ಯಶಸ್ಸನ್ನು ನೋಡೋಕೆ ಅವರಪ್ಪ ತೂಗುದೀಪ ಶ್ರೀನಿವಾಸ್ ಬದುಕಿರಬೇಕಿತ್ತು ಅನ್ನುತ್ತಾ , ಖಳನಾಯಕನಾಗಿ ತೂಗುದೀಪ ಪೀಕ್ನಲ್ಲಿದ್ದ ದಿನಗಳನ್ನು ನೆನಪಿಸಿಕೊಂಡರು.
ಈವರೆಗೆ 14 ಲೋಕಸಭಾ ಕಲಾಪಕ್ಕೆ ತಪ್ಪದೆ ಹಾಜರಾಗಿರುವ ‘ಮಂಡ್ಯದ ಗಂಡು’ ಅಂಬಿ ದೇಹದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿ ತೀರಾ ಗುಂಡಗಾದ ಕಾರಣ ಇನ್ನು ಅವರು ಬಣ್ಣ ಹಚ್ಚುವುದೇ ಇಲ್ಲವೇನೋ ಎಂಬ ಗುಮಾನಿ ಶುರುವಾಗಿತ್ತು. ಆದರೀಗ ಅಂಬಿ ಈ ಗುಮಾನಿಯನ್ನು ಬಡಿದೋಡಿಸಿದ್ದಾರೆ. 12 ವರ್ಷದ ಹಿಂದೆ ತೆರೆಕಂಡು ಸೂಪರ್ ಹಿಟ್ ಆಗಿದ್ದ ತಮಿಳು ಚಿತ್ರ ದಳಪತಿಯ ಕನ್ನಡ ರೀಮೇಕಲ್ಲಿ ಅಂಬಿ ನಟಿಸುತ್ತಿದ್ದಾರೆ.
ಕಾಲ್ಷೀಟಿಗೇ ಅಂಟಿಕೊಂಡು ನಂಗೆ ಕೆಲಸ ಮಾಡೋಕಾಗಲ್ಲ. ಇದನ್ನು ಮೊದಲೇ ನಿರ್ಮಾಪಕರಿಗೆ ಹೇಳಿದ್ದೇನೆ. ನನ್ನ ಟೈಮಿಗೆ ಹೊಂದಿಸಿಕೊಂಡೇ ಶೂಟಿಂಗ್ ನಡೆಸಬೇಕಾಗುತ್ತದೆ ಅನ್ನೋದಕ್ಕೂ ಅವರು ಒಪ್ಪಿದ್ದಾರೆ. ಹಾಗಂತ ನಾನು ಅವರಿಗೆ ನಷ್ಟ ಆಗೋಹಾಗೆ ಮಾಡಲ್ಲ ಅಂತ ಅಂಬಿ ಇರುವ ವಿಚಾರವನ್ನು ಮುಚ್ಚುಮರೆ ಮಾಡದೆ ಬಿಚ್ಚಿಟ್ಟರು.
ಎಂ.ಸಿ.ದಯಾನಂದ್ ನಿರ್ಮಿಸಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಎನ್ನೆಸ್ ರಾವ್ ಸುತ ಓಂಪ್ರಕಾಶ್ ರಾವ್ ಚಿತ್ರದ ನಿರ್ದೇಶಕರಾಗಿ ಗೊತ್ತಾಗಿದ್ದಾರೆ. ದರ್ಶನ್ ಜೊತೆ ಅಂಬಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದು, ದರ್ಶನ್ ಪುಳಕಿತರಾಗಿದ್ದರು. ಚಿತ್ರದ ಮೊದಲ ಶಾಟ್ಗೆ ಕ್ಲಾಪ್ ಮಾಡಿದ ಸುಮಲತಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಮ್ಮ ಸೂರ್ಯ ಶಿಕಾರಿಯ ಸಾರಥಿ ರವಿ ಬೆಳಗೆರೆ ಅಭಿನಯಿಸುತ್ತಿರುವುದು ಒಂದೂವರೆ ಕೋಟಿ ರುಪಾಯಿ ಬಂಡವಾಳದ ಈ ಅದ್ಧೂರಿ ಚಿತ್ರದ ಇನ್ನೊಂದು ಸೆಳಕು.
ಮುಖಪುಟ / ಸ್ಯಾಂಡಲ್ವುಡ್