For Quick Alerts
For Daily Alerts
Don't Miss!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗಪ್ಪ ಕುಟುಂಬದ ಜೊತೆ ಅಣ್ಣಾವ್ರು ಕಳೆದ ಒಂದು ತಾಸು...
News
-Staff
By Staff
|
ಬೆಂಗಳೂರು : ಯೋಚನೆ ಮಾಡಬೇಡಿ, ನಾಗಪ್ಪನವರಿಗೆ ವೀರಪ್ಪನ್ ಸಸ್ಯಾಹಾರವನ್ನೇ ಕೊಡ್ತಾನೆ !ನಾಗಪ್ಪನವರ ಹೆಂಡತಿ- ಮಕ್ಕಳಿಗೆ ಇಂಥಾ ಹತ್ತು ಹಲವು ಮಾಹಿತಿ ಕೊಟ್ಟು , ಅವರು ಯಾವುದೇ ತೊಂದರೆಯಿಲ್ಲದೆ ಬಿಡುಗಡೆಯಾಗಿ ಬರ್ತಾರೆ ಅಂತ ಅಣ್ಣಾವ್ರು ಹೇಳಿದ ನಂತರ ಬಸವಳಿದ ನಾಗಪ್ಪನವರ ಕುಟುಂಬಕ್ಕೆ ಕೊಂಚ ನೆಮ್ಮದಿ.ಸದಾಶಿವನಗರದ ವರನಟ ರಾಜ್ ಮನೆಯಲ್ಲಿ ಶನಿವಾರ ಒಂದು ತಾಸು ಮುಚ್ಚಿದ ಕೋಣೆಯಲ್ಲಿ ನಾಗಪ್ಪನವರ ಕುಟುಂಬ ಮಾತಾಡಿ, ಬಂದಿತು. ಏನೇನು ಮಾತುಕತೆ ನಡೆಯಿತು ಎಂಬುದರ ಪೂರ್ಣ ಪಾಠ ಅಲಭ್ಯ. ನಾಗಪ್ಪನವರ ಕುಟುಂಬದವರ ಪ್ರಕಾರ, ಊಟ- ಆರೋಗ್ಯ ವಗೈರೆ ವಿಚಾರಗಳ ಬಗ್ಗೆ ಹಾಗೂ ವೀರಪ್ಪನ್ ವರ್ತನೆ ಕುರಿತು ಅಣ್ಣಾವ್ರ ಅನುಭವವನ್ನು ಕೇಳಿ ಪಡೆಯುವುದು ಈ ಮಾತುಕತೆಯ ಉದ್ದೇಶವಾಗಿತ್ತು. ನಾಗಪ್ಪನವರ ಕುಟುಂಬಕ್ಕೆ ಅಣ್ಣಾವ್ರು ಹೇಳಿರುವ ಕೆಲವು ವಿಚಾರಗಳು....
- ವೀರಪ್ಪನ್ ಸಾಮಾನ್ಯವಾಗಿ ರಾತ್ರಿ ಹೊತ್ತು ಜಾಗ ಬದಲಾಯಿಸುತ್ತಾನೆ. ಬಹುತೇಕ ನೀರು ದೊರೆಯುವ ಸ್ಥಳದಲ್ಲಿ ಬಿಡಾರ ಹೂಡುತ್ತಾನೆ.
- ಮಾಂಸಾಹಾರ ತಿನ್ನಲೇಬೇಕು ಅಂತ ಬಲವಂತ ಮಾಡೋದಿಲ್ಲ. ಅನ್ನ, ಸಾಂಬಾರಿನಂಥ ಸಸ್ಯಾಹಾರವನ್ನ ಕೊಡುತ್ತಾನೆ.
- ತನ್ನ ಉದ್ದೇಶ ಈಡೇರುವವರೆಗೆ ಪಟ್ಟು ಬಿಡುವ ಆಸಾಮಿ ಅವನಲ್ಲ.
- ಒತ್ತೆಯಾಳುಗಳ ಆರೋಗ್ಯದ ಬಗೆಗೆ ಆತ ನಿಗಾ ವಹಿಸುತ್ತಾನೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Monday, September 2, 2002, 5:30 [IST]
Other articles published on Sep 2, 2002