Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಥಿಯೇಟರ್ ಮುಂದೆ ಬಲೂನಿನಲ್ಲಿ ದಿಗಂತ್ ಹಾರಾಟ
ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಚಿತ್ರ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ಪ್ರಚಾರ ಕಾರ್ಯವನ್ನು ವಿನೂತನ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದಾರೆ. ಅದರಲ್ಲೊಂದು, ಮಂಡ್ಯದಲ್ಲಿ ಪ್ರಮೋಶನ್ ಹೆಸರಿನಲ್ಲಿ ದೊಡ್ಡ ಮುದ್ದೆಯೊಂದನ್ನು ಲೋಕಾರ್ಪಣೆ ಮಾಡುವುದು. ಸ್ಥಳೀಯ ಸಂಘಸಂಸ್ಥೆಗಳ ನೆರವಿನಿಂದ ಪೌಷ್ಠಿಕ ಸತ್ವಗಳಿರುವ ಮುದ್ದೆಯನ್ನು ತಯಾರಿಸಿ ಅದನ್ನು ನಂತರ ಬಡಮಕ್ಕಳಿಗೆ ಹಂಚುವುದು.
ಇದಲ್ಲದೇ ಇನ್ನೊಂದು ಪ್ರಯೋಗಕ್ಕೂ ಇಂದ್ರಜಿತ್ ಮುಂದಾಗಿದ್ದಾರೆ. ಮಾಮೂಲಿ ವುಡನ್ ಕಟೌಟ್ ನಿಲ್ಲಿಸುವ ಬದಲು, ಒಂದು ಕಡೆ ದಿಗಂತ್ ಫೋಟೋ ಹಾಗೂ ಇನ್ನೊಂದು ಕಡೆ ಚಿತ್ರದ ಶೀರ್ಷಿಕೆ ಇರುವ ಬಲೂನ್ ಒಂದನ್ನು ಬಿಡುಗಡೆಯಾದ ಚಿತ್ರಮಂದಿರಗಳ ಮುಂದೆ ಹಾರಿಬಿಡಲು ನಿರ್ಧರಿಸಿದ್ದಾರೆ. ಇದು ಮಾಮೂಲಿ ಕಟೌಟ್ ನಿಲ್ಲಿಸುವುದಕ್ಕಿಂತ ಜಾಸ್ತಿ ದುಬಾರಿ.
ಆದರೆ ಇಂದ್ರಜಿತ್ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೊಸದನ್ನು ಮಾಡುವ ಪ್ರಯತ್ನವಷ್ಟೇ ತಮ್ಮದು ಎಂದು ಈ ಮೂಲಕ ತೋರಿಸಲಿದ್ದಾರಂತೆ. ಅಂದಹಾಗೆ, ಈ ಚಿತ್ರ ಇದೇ ತಿಂಗಳು, ಏಪ್ರಿಲ್ 6, 2012 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಯೂ ಟ್ಯೂಬ್ ನಲ್ಲಿ ಅದಕ್ಕೂ ಮೊದಲೇ ಭಾರತ ಹೊರತುಪಡಿಸಿ ಮಿಕ್ಕ ಕಡೆ ಸಿನಿಮಾ ಪ್ರೀಮಿಯರ್ ಶೋ ಲಭ್ಯವಿದೆ. (ಒನ್ ಇಂಡಿಯಾ ಕನ್ನಡ)