ತೆಲುಗು ಚಿತ್ರಸೀಮೆಗೆ ದುನಿಯಾ ಪಯಣ

ಸಿಕಂದ್ರಾಬಾದ್ ನ ಪವನ್ ಎಂಬ ಹೊಸಬರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಲಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಮುತ್ಯಾಲ ಸುಬ್ಬಯ್ಯ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಲಕ್ಷ್ಮಣ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಎನೌಕೌಂಟರ್ ಸ್ಪೆಷಲಿಸ್ಟ್ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ.
ಫೆಬ್ರವರಿ 2007ರಲ್ಲಿ ತೆರೆಕಂಡಿದ್ದ ದುನಿಯಾ ಚಿತ್ರ ನಿರ್ದೇಶಕ ಸೂರಿ ಸೇರಿದಂತೆ ನಟ, ನಟಿಯರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು. ವಿಜಯ್ ಮತ್ತು ರಶ್ಮಿ ಅವರ ಉತ್ತಮ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು . ತೆಲುಗಿನಿಂದ ಅನೇಕ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗುತ್ತಿರುವ ಈ ಸಂದರ್ಭದಲ್ಲಿ ಕನ್ನಡದ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿರುವುದು ಮೆಚ್ಚ ಬೇಕಾದ ಸಂಗತಿ.ತೆಲುಗಿನಲ್ಲೂ ದುನಿಯಾ ಜಯಭೇರಿ ಬಾರಿಸಲಿ ಎಂದು ಆಶಿಸೋಣ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications