twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿ ನಟ ಪಟ್ರೆ ಅಜಿತ್‌ ಮೇಲೆ ವಕೀಲರ ದಾಳಿ

    By Rajendra
    |

    Actor Patre Ajith
    ಪತ್ರಕರ್ತರು, ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡಿದ ವಕೀಲರು ಇದೀಗ ಕನ್ನಡದ ಸಿನಿ ನಟ ಪಟ್ರೆ ಅಜಿತ್ ಮೇಲೆ ತಮ್ಮ ಪ್ರತಾಪವನ್ನು ತೋರಿಸಿದ್ದಾರೆ. ಇಷ್ಟಕ್ಕೂ ಪಟ್ರೆ ಅಜಿತ್ ಏನಂತಹ ಅಪರಾಧ ಮಾಡಿದರು? ಕಪ್ಪು ಕೋಟಿನ ವಕೀಲರೊಬ್ಬರ ವಕ್ರದೃಷ್ಟಿ ಇವರ ಮೇಲೇಕೆ ಬಿತ್ತು?

    ಅಜಿತ್ ಪತ್ರಕರ್ತರ ಪರ ವಹಿಸಿ ಮಾತನಾಡಿರುವುದೇ ಈ ವಕೀಲರ ಪಿತ್ತ ಕೆರಳಲು ಕಾರಣವಾಗಿದೆ. ತಮ್ಮ ಫೇಸ್‌ಬುಕ್‌ನಲ್ಲಿ ಅಜಿತ್ ಪತ್ರಕರ್ತರ ಮೇಲಿನ ವಕೀಲರ ಗೂಂಡಾಗಿರಿಯನ್ನು ಖಂಡಿಸಿದ್ದರು. ಇದರಿಂದ ಕುಪಿತರಾದ ಲೋಕೇಶ್ ಎಂಬ ವಕೀಲರು ಪಟ್ರೆ ವಿರುದ್ಧ ಹರಿಹಾಯ್ದಿದ್ದಾರೆ.

    ಪಟ್ರೆ ಅಜಿತ್ ಕಾನೂನು ಪದವೀಧರರು ಹೌದು. ವಕೀಲರ ಅಮಾನವೀಯ ಕೃತ್ಯವನ್ನು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಖಂಡತುಂಡವಾಗಿ ಖಂಡಿಸಿದ ಅವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರಿಂದ ಕುಪಿರಾದ ಸನ್ಮಾರ್ಗ ಲಾ ಚೇಂಬರ್ ಮುಖ್ಯಸ್ಥರಾದ ಲೋಕೇಶ್ ತಮಗೆ ಬೆದರಿಕೆ ಒಡ್ಡಿದ್ದಾಗಿ ಅಜಿತ್ ತಿಳಿಸಿದ್ದಾರೆ. ಅಜಿತ್ ಅವರನ್ನು ಬಾರ್ ಕೌನ್ಸಿಲ್‌ನಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ಪಟ್ರೆ ಅಜಿತ್ ಹೇಳಿದ್ದಾರೆ. (ಏಜೆನ್ಸೀಸ್)

    English summary
    Kannada actor Patre Ajith claims that one of the lawyer attacks on his facebook account. Because the actor condemns lawyers attack on media. He further said that the lawyer threatened him to kicked out from Bar Council, the actor himself as a law graduate.
    Saturday, March 3, 2012, 18:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X