Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾರಿಜಾತ ಹಿಡಿದು ಕುಣಿಯುತ್ತಿರುವ ಮನಸಾರೆ ಜೋಡಿ
ಡ್ಯಾನ್ಸ್ ಕೋರಿಯೋಗ್ರಫರ್ ಆಗಿ ಕನ್ನಡ ಚಿತ್ರರಂಗದಲ್ಲಿ ತಕ್ಕಮಟ್ಟಿನ ಹೆಸರು ಗಳಿಸಿರುವ ಪ್ರಭು ಶ್ರೀನಿವಾಸ್ ಈ ಚಿತ್ರಕ್ಕೆ ನಿರ್ದೇಶಕರು. ಮಧುರ ಗೀತೆಗಳ ಮೋಡಿಗಾರ ಮನೋಮೂರ್ತಿ ಸಂಗೀತ ಚಿತ್ರದ ಹೈಲೈಟ್. ಅರಮನೆ ನಗರಿ ಮೈಸೂರಿನಲ್ಲಿ ಜನವರಿ 24 ರಂದು ಸೆಟ್ಟೇರಿರುವ ಈ ಚಿತ್ರದ ಚಿತ್ರೀಕರಣ ಮಾನಸ ಗಂಗೋತ್ರಿಯಲ್ಲಿ ಕಳೆದ ವಾರದಿಂದ ಚಿತ್ರೀಕರಣ ಆರಂಭಿಸಿದೆ. ಒಂದೇ ಹಂತದಲ್ಲಿ ಪೂರ್ತಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ. ಅದೇನೂ ಕಷ್ಟವಾಗದು ಬಿಡಿ.
ಮತ್ತೊಂದು ರಿಮೇಕ್ : ಕಥೆ, ಚಿತ್ರಕಥೆ, ಬೇಕಾದರೆ ಟ್ಯೂನ್ ಕೂಡಾ ಇದೆ. ಚಿತ್ರೀಕರಣ ಮಾತ್ರ ಕನ್ನಡ ನಾಡಿನಲ್ಲಿ ಮಾಡಿದರೆ ಸಾಕು ಮಿಕ್ಕ ಕಚ್ಚಾವಸ್ತು ತಮಿಳಿನಿಂದ ಎರವಲು ಪಡೆಯಬಹುದು. ಬಾಸ್ ಎಂಗಿರ ಬಾಸ್ಕರನ್ ಎಂಬ ತಮಿಳು ಚಿತ್ರ ( ಇಂಗ್ಲೀಷ್ ಅರ್ಥ: Bhaskaran alias Boss)ದಲ್ಲಿ ಆರ್ಯ, ನಯನತಾರಾ ಮಾಡಿದ್ದ ಪಾತ್ರವನ್ನೇ ಇಲ್ಲಿ ದಿಗಂತ್, ಐಂದ್ರಿತಾ ರಿಪೀಟ್ ಮಾಡುತ್ತಿದ್ದಾರೆ. ಸೋಮಾರಿ ಪಾತ್ರಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿರುವ ಧೂದ್ ಪೇಡ ದಿಗಂತ್ ಹೇಳಿ ಮಾಡಿಸಿದಂಥ ಪಾತ್ರ ಈ ಚಿತ್ರದಲ್ಲಿದೆ. ಆದರೆ, ಹಳಸಿದ ಚಿತ್ರಾನ್ನಕ್ಕೆ ಹೊಸ ಒಗ್ಗರಣೆ ಹಾಕಿ ಹೊಸ ರುಚಿ ಎಂದಾಗ ಸಹಿಸುವುದು ಅಚ್ಚ ಕನ್ನಡಿಗರಿಗೆ ಕಷ್ಟ ಕಷ್ಟ. ಕಾಸ್ಮೊಪಾಲಿಟನ್ ಪ್ರಜೆಗಳಿಗೆ ಎಲ್ಲವೂ ಓಕೆ.