Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿ ಹಬ್ಬಕ್ಕೆ ಮೂರು ವಿಭಿನ್ನ ಚಿತ್ರಗಳು ತೆರೆಗೆ
ದೀಪಾವಳಿ ಹಬ್ಬಕ್ಕೆ ಮೂರು ಕನ್ನಡ ಚಿತ್ರಗಳು ತೆರೆಗೆ ಬರುತ್ತಿವೆ. ಬಿಂದಾಸ್ ಹುಡುಗಿ, ಶಾಕ್ ಹಾಗೂ ರಾಷ್ಟ್ರಕವಿ ಕುವೆಂಪು ಚಿತ್ರಗಳು ಒಟ್ಟಿಗೆ ತೆರೆಕಾಣಲಿವೆ. ಈಗಾಗಲೆ ತೆರೆಕಂಡಿರುವ ಜಾಕಿ, ಕಿಚ್ಚ ಹುಚ್ಚ , ಯಕ್ಷ, ಗಾನ ಬಜಾನಾ, ಪಂಚರಂಗಿ ಹಾಗೂ ಗುಂಡ್ರಗೋವಿ ಚಿತ್ರಗಳು ಯಶಸ್ವಿ ಪ್ರದರ್ಶ ಕಾಣುತ್ತಿರುವ ಕಾರಣ ಹೊಸದಾಗಿ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೆ ಚಿತ್ರಮಂದಿರ ಸಮಸ್ಯೆ ಎದುರಾಗಿದೆ.
ಪ್ರಿಯಾ ಹಾಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ 'ಬಿಂದಾಸ್ ಹುಡುಗಿ'. ಪ್ರಚಾರವನ್ನು ನೋಡಿದರೆ ಚಿತ್ರ ಬಿಂದಾಸ್ ಆಗಿಯೇ ಇರುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಈ ಚಿತ್ರಕ್ಕೆ ಗೌರಮ್ಮ ನಿರ್ಮಾಪಕರು. ಪ್ರಿಯಾ ಹಾಸನ್ ಜೊತೆ ರವಿಶಂಕರ್ ಅಭಿನಯವೂ ಇದೆ. ಚಿತ್ರಕ್ಕೆ ಯರ್ರಾ ರಮೇಶ್ ಸಂಗೀತ ನೀಡಿದ್ದಾರೆ.
ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿರುವ 'ಶಾಕ್' ಚಿತ್ರದ ವಿಶೇಷವೆಂದರೆ, ಈ ಚಿತ್ರವನ್ನು ಕೇವಲ ಒಂಭತ್ತು ದಿನಗಳಲ್ಲಿ ಚಿತ್ರೀಕರಿಸಿರುವುದು. ಹಿಂದಿಯ 'ಕೌನ್' ಚಿತ್ರ ರೀಮೇಕ್ ಇದಾಗಿದೆ. ಸಕಲೇಶಪುರದ ವಿಶಾಲ ಮನೆಯೊಂದರಲ್ಲಿ ಚಿತ್ರೀಕರಣ ನಡೆದಿದೆ. ಹಾರರ್ ಹಾಗೂ ಸೈಕಿಕ್ ಕಥಾಹಂದರವುಳ್ಳ ಈ ಚಿತ್ರದ ನಾಯಕಿ ಸುಮಾ ಗುಹಾ. ಇಡೀ ಚಿತ್ರ ಮನೆಯೊಂದರಲ್ಲಿ ನಡೆಯುತ್ತದೆ. ಹ ಸು ರಾಜಶೇಖರ್ ಆಕ್ಷನ್, ಕಟ್ ಹೇಳಿದ್ದಾರೆ.
ಯಾವುದೇ ಪ್ರಚಾರ, ಸದ್ದಿಲ್ಲದೆ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ 'ರಾಷ್ಟ್ರಕವಿ ಕುವೆಂಪು'. ಕರ್ನಾಟಕ ರತ್ನ, ರಾಷ್ಟ್ರಕವಿ ಕುವೆಂಪು ಅವರ ಜೀವನ ಕಥೆಯನ್ನು ನಿರ್ದೇಶಕ, ಕಲಾವಿದ ಸಿ ಆರ್ ಸಿಂಹ ಬೆಳ್ಳಿತೆರೆಗೆ ತರುತ್ತಿದ್ದಾರೆ. ಕುವೆಂಪು ಪಾತ್ರದಲ್ಲಿ ಸಿ ಆರ್ ಸಿಂಹ ಅವರೇ ಕಾಣಿಸುತ್ತಿರುವುದು ವಿಶೇಷ. ಅವರ ಪುತ್ರ ಋತ್ವಿಕ್ ಸಿಂಹ ನಿರ್ದೇಶಿಸಿರುವ ಚಿತ್ರವಿದು.
ಪದ್ಮ ಪ್ರಕಾಶ್ ಮತ್ತು ಅರವಿಂದ ಪ್ರಕಾಶ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಕುವೆಂಪು ಅವರು ರಚಿಸಿರುವ ಎಂಟು ಗೀತೆಗಳಿಗೆ ವಿ ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಬಿ ಎಸ್ ಬಸವರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಮೂರು ವಿಭಿನ್ನ ಚಿತ್ರಗಳು ಈ ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತಾಗಲಿ.