Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ನಡುವೆ ಇಂಗ್ಲಿಷ್ ಬೆರೆಸೊಲ್ಲ’! :ನೀತು
ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರಿಗೆ ನಟಿ ನೀತು ನೀಡಿದ್ದ ಮಾತಿದು. ಹೇಳಿಕೇಳಿ ಬರಗೂರು ಕನ್ನಡ ಮೇಷ್ಟ್ರು, ಲೇಖಕರು. ಮಿಗಿಲಾಗಿ ಹೋರಾಟಗಾರರು. ನೀತು ಮಾತುಗಳಲ್ಲಿ ಕನ್ನಡಕ್ಕಿಂಥ ಇಂಗ್ಲಿಷ್ ಶಬ್ದಗಳೇ ಹೆಚ್ಚಾಗಿರುವುದು ಮೇಷ್ಟ್ರಿಗೆ ಸಹಜವಾಗಿಯೇ ಇರುಸುಮುರುಸು ಉಂಟುಮಾಡಿದೆ. ಆ ಕಾರಣದಿಂದಾಗಿ ಅವರು ಸೆಟ್ನಲ್ಲಿ ಪ್ರೀತಿಯಿಂದ ಗದರಿಕೊಂಡಿದ್ದಾರೆ. ನೀತು ಮಾತು ಕೊಟ್ಟಿದ್ದಾರೆ.
ಸೆಟ್ನಲ್ಲಿ
ಎಷ್ಟರಮಟ್ಟಿಗೆ
ನೀತು
ತಮ್ಮ
ಮಾತಿಗೆ
ಕಟ್ಟುಬಿದ್ದಿದ್ದರೋ
ಗೊತ್ತಿಲ್ಲ.
ಸುದ್ದಿಗೋಷ್ಠಿಯಲ್ಲಂತೂ
ಕಲಬೆರಕೆ
ಕನ್ನಡ
ಮಾತನಾಡುತ್ತಿದ್ದರು.
ಮೇಷ್ಟ್ರು
ಹುಸಿಮುನಿಸು
ತೋರಿದಾಗ
ಹುಳಿಮುಖ
ಮಾಡಿಕೊಂಡರು.
'ಮತ್ತೂ
ಮಾತನಾಡಿದರೆ
ಇನ್ನಷ್ಟು
ತಪ್ಪು
ಮಾಡ್ತೇನೆ"
ಎಂದು
ತೆಪ್ಪಗೆ
ಕೂತರು.
'ಗಾಳಿಪಟ"
ಚಿತ್ರದಲ್ಲಿ
ನೀತು
ಮಾಡಿದ್ದ
ಬಜಾರಿ
ಪಾತ್ರ
ಅಪಾರ
ಜನಪ್ರಿಯತೆ
ಗಳಿಸಿತ್ತು.
ಥೂ
ಥೂ
ಎಂದು
ನೀತು
ಚಿತ್ರದಲ್ಲಿ
ಉಗಿಯುತ್ತಿದ್ದರೆ
ಆ
ಉಗುಳನ್ನು
ಆಸ್ವಾದಿಸಿದವರ
ಸಂಖ್ಯೆ
ದೊಡ್ಡದು.
ಈ
ಚಿತ್ರದ
ನಂತರ
ಅವರನ್ನು
ಹುಡುಕಿಕೊಂಡು
ಬಂದದ್ದೆಲ್ಲ
ಬಜಾರಿ
ಪಾತ್ರಗಳೇ.
'ಏಕತಾನತೆಯನ್ನು
ಎಷ್ಟೂಂತ
ಸಹಿಸೋದು.
ಅನೇಕ
ಪಾತ್ರಗಳನ್ನು
ನಿರಾಕರಿಸಿದೆ"
ಎನ್ನುವುದು
ಪಾತ್ರಗಳ
ಆಯ್ಕೆಯಲ್ಲಿ
ನೀತು
ಅವರಿಗಿರುವ
ಬದ್ಧತೆಗೆ
ಸಾಕ್ಷಿಯಂತಿದೆ.
ಮೋಹನ್ ನಿರ್ದೇಶನದ 'ವೆಂಕಟ ಇನ್ ಸಂಕಟ"ದ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದಾರೆ. ಮಲೆಯಾಳಿ ಹುಡುಗಿಯ ಪಾತ್ರವದು. ನೀತು ಅಭಿನಯ ನೋಡಿ ನಿರ್ದೇಶಕ ಮೋಹನ್ ಮೂಗಿನ ಮೇಲೆ ಬೆರಳಿಟ್ಟಿದ್ದು ಈಗಾಗಲೇ ವರದಿಯಾಗಿರುವ ಸುದ್ದಿ.
ಇದನ್ನೂ ಓದಿ: ಉಗ್ರಗಾಮಿಗೆ ಗೋಡ್ಖಿಂಡಿ ಏಕವ್ಯಕ್ತಿ ಸಂಗೀತ