twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರ ತೆರೆಗೆ ಈ ಶತಮಾನದ ವೀರ ಮದಕರಿ

    By Staff
    |

    sudeep
    ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್‌ಗಾಂಧಿ ನಿರ್ಮಿಸಿ ಸುದೀಪ್ ನಿರ್ದೇಶಿಸಿರುವ 'ಈ ಶತಮಾನದ ವೀರ ಮದಕರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ದೇಶನದ ಹೊಣೆ ಹೊತ್ತಿದ್ದ ಸುದೀಪ್ ಈ ಚಿತ್ರದ ನಾಯಕ ಕೂಡ. ದ್ವಿಪಾತ್ರದಲ್ಲಿ ಅಭಿನಯಿಸಿರುವ ಸುದೀಪ್‌ಗೆ ಪವಿತ್ರ ಹಾಗೂ ರಹಿಣಿ ನಾಯಕಿಯರಾಗಿ ಅಭಿನಯಿಸಿದ್ದಾರೆ.

    ಚಿತ್ರದ ಶೀರ್ಷಿಕೆ ಕೇಳಿದ ಕ್ಷಣ ಐತಿಹಾಸಿಕ ಚಿತ್ರ ಅನಿಸುವುದು ಸಹಜ. ಆದರೆ ಇವನು 'ಈ ಶತಮಾನದ ವೀರಮದಕರಿ'. ಚಿತ್ರದುರ್ಗದ ರಾಜ ಮದಕರಿ ಮದಿಸಿದ ಕರಿಯ ಮದವಡಗಿಸಿದರೆ ಈ ವೀರ ಮದಕರಿ ಸಮಾಜದ ದುಷ್ಟಶಕ್ತಿಗಳನ್ನು ದಮನ ಮಾಡುತ್ತಾನೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಅವರ ರಾಗ ಸಂಯೋಜನೆಯಲ್ಲಿ ಮೂಡಿಬಂದಿರುವ ಮದಕರಿಯ ಹಾಡುಗಳು ಕೇಳುಗರಿಗೆ ಮುದ ನೀಡುತ್ತಿದೆ. ಕರ್ನಾಟಕದ ಕೀರ್ತಿಗೆ ಕಳಶದಂತಿರುವ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯ ಸೊಬಗಿನಲ್ಲಿ ಚಿತ್ರಕ್ಕೆ ಸಾಕಷ್ಟು ಚಿತ್ರೀಕರಣ ನಡೆದಿದೆ.

    ತಾಂತ್ರಿಕ ಬಳಗ: ಛಾಯಾಗ್ರಹಣ ಶ್ರೀವೆಂಕಟ್, ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್‌ರಾಜ್ ಸಹನಿರ್ದೇಶನ,ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ.

    ತಾರಾಬಳಗ: ಸುದೀಪ್, ಪವಿತ್ರ, ರಹಿಣಿ, ದೇವರಾಜ್, ದಿನೇಶ್‌ಗಾಂಧಿ, ದೊಡ್ಡಣ್ಣ, ಟೆನ್ನಿಸ್‌ಕೃಷ್ಣ.

    (ದಟ್ಸ್ ಕನ್ನಡ ಚಿತ್ರವಾರ್ತೆ)
    ಐತಿಹಾಸಿಕ ನಗರಿಗಳಲ್ಲಿ ಸುದೀಪ್ ನರ್ತನ

    Wednesday, March 4, 2009, 12:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X