Don't Miss!
- News Mandya: ಆಪರೇಷನ್ ಹಸ್ತ ಕಾರ್ಯಾಚರಣೆಗೆ ಬ್ರೇಕ್ ಹಾಕಿದ ಎಚ್ಡಿಕೆ; ಕಾಂಗ್ರೆಸ್ಗೆ ಹಿನ್ನಡೆ
- Lifestyle 11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಮಹಿಳೆ..! ಮಣಿ ಅಮ್ಮ ಎಂಬ ಧೀರ ಮಹಿಳೆ ಕಥೆ
- Sports ಮತ್ತೆ ಪಾಕಿಸ್ತಾನ ಕ್ರಿಕೆಟ್ ತಂಡದ ಚುಕ್ಕಾಣಿ ಬಾಬರ್ ಅಜಮ್ ಕೈಗೆ?
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೌಂದರ್ಯ ಅಭಿನಯದ ‘ಶ್ವೇತನಾಗ’ ಜೂನ್ನಲ್ಲಿ ತೆರೆಗೆ
- ಸಿನಿಡೆಸ್ಕ್, ದಟ್ಸ್ಕನ್ನಡ
ಕಳೆದ ವರ್ಷ ಮದುವೆಯ ಮೊದಲ ಮಾಸದಲ್ಲೇ ಸೌಂದರ್ಯ ಈ ಚಿತ್ರಕ್ಕೆ ಸಹಿ ಮಾಡಿದ್ದರು. ಆಗ ಚಿತ್ರ ಮೂರು ಭಾಷೆಗಳಲ್ಲಿ ತೆರೆಗೆ ಬರುವ ಅಟ್ಟಣೆಯಿತ್ತು. ಉತ್ತರ ಕನ್ನಡದ ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಚಿತ್ರ ಜನವರಿಯಲ್ಲಿ ತೆರೆಗೆ ಬರಬೇಕಾಗಿತ್ತು. ಆಕೆಗೆ ವೀಕ್ಷಿಸುವ ಭಾಗ್ಯವಿರಲಿಲ್ಲವೇನೋ!
‘ಮಾರ್ಕ್ ಸಿನಿಮಾ’ ಲಾಂಛನದಡಿಯಲ್ಲಿ ಎಚ್.ಎನ್.ಮಾರುತಿ ಚಿತ್ರ ನಿರ್ಮಿಸಿದ್ದಾರೆ. ಸಂಜೀವ ನಿರ್ದೇಶನ. ದಿವಾಕರ್ ಛಾಯಾಗ್ರಹಣ. ನಾಗೇಂದ್ರ ಪ್ರಸಾದ್ ಬರೆದ ಹಾಡುಗಳಿಗೆ ಕೋಟಿ ಸಂಗೀತ. ತಾರಾಗಣದಲ್ಲಿ ಸಂಗೀತ, ಅಭಿನಯಶ್ರಿ, ಶರತ್ ಬಾಬು, ದ್ವಾರಕೀಶ್, ಮುಖ್ಯಮಂತ್ರಿ ಚಂದ್ರು ಮಂತಾದವರಿದ್ದಾರೆ.
ನೆರೆಮನೆಗಳಲ್ಲಿ ಮಿಂಚುತ್ತಿರುವ ಬೆಂಗಳೂರಿನ ಹುಡುಗ ಅಬ್ಬಾಸ್ ಚಿತ್ರದ ನಾಯಕ. ‘ಕಾದಲ್ ದೇಶಂ’ (ತಮಿಳು)ಚಿತ್ರದ ಮೂಲಕ ಖ್ಯಾತಿಯ ಶಿಖರವೇರಿದ ಅಬ್ಬಾಸ್, ಕನ್ನಡದಲ್ಲಿ ಮಾತ್ರ ಯಸಸ್ಸು ಕಾಣಲಿಲ್ಲ. ಅವರ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಶಾಂತಿಶಾಂತಿಶಾಂತಿ’ ಸಹ ಗೆಲುವು ಕಾಣಲಿಲ್ಲ. ಈ ಚಿತ್ರದಲ್ಲಿ ಯಶಸ್ಸು ದೊರೆತರೆ ಹೊಸ ಇನ್ನಿಂಗ್ಸ್ ಆರಂಭಿಸಬಹುದು ಎಂಬುದು ಅವರ ಬಯಕೆ. ಆದರೆ ಆಕೆಗೆ ಪ್ರಸಿದ್ಧಿ ದೊರೆತರೂ... ಆಟ ಮುಗಿದ ಅಂಗಣದಂತೆ. ಅಲ್ಲಿ ಪ್ರೇಕ್ಷಕರ ಕಣ್ಣಂಚಿನ ನೆನಹುಗಳು ಮಾತ್ರ ಶಾಶ್ವತ. ‘ಶ್ವೇತನಾಗ’ಯಶಸ್ಸು ಕಂಡರೆ ಅದೊಂದು ಅರ್ಥಪೂರ್ಣ ಶ್ರದ್ಧಾಂಜಲಿ.
ಮುಖಪುಟ / ಸ್ಯಾಂಡಲ್ವುಡ್