Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಮಾರಣ್ಣನ ಟೀವಿಯಲ್ಲಿ ರಮೇಶಣ್ಣನ ಪತ್ತೇದಾರಿ ಸೀರಿಯಲ್ಲು!
ನಾನು
ಯಾವ
ಪಾತ್ರ
ಮಾಡಲಿ?
ಮುದುಕನ
ಪಾತ್ರ
ಮಾಡಿದರೆ
ಅಭಿಮಾನಿಗಳು
ಒಪ್ಪೋದಿಲ್ಲ..
ಹುಡುಗನ
ಪಾತ್ರ
ಮಾಡೋದಿಕ್ಕೆ
ಆಗೋದಿಲ್ಲಎಂದಿದ್ದ
ನಟ
ಡಾ.ರಾಜ್
ಕುಮಾರ್,
ತಮ್ಮ
ಸಂದಿಗ್ಧತೆಯನ್ನು
ಒಂದು
ಸಲ
ತೋಡಿಕೊಂಡಿದ್ದರು.
ಒಂದು
ಹಂತ
ದಾಟಿದ
ಮೇಲೆ
ಎಲ್ಲ
ನಟರು
ಈ
ಸಮಸ್ಯೆಯನ್ನು
ಎದುರಿಸಬೇಕಾಗುತ್ತದೆ.
ಈ ತಾಕಲಾಟಗಳಿಂದಾಗಿಯೇ ಕಮಲ್ ಹಾಸನ್ ರಂತವರು,ಪ್ರತಿಚಿತ್ರದಲ್ಲೂ ಏನೇನೋ ಕಸರತ್ತು ಮಾಡುತ್ತಾರೆ. ಈ ಸಂದಿಗ್ಧ ಅರ್ಥವಾಗದವರು ಪದೇಪದೇ ಸೋಲುತ್ತಿರುತ್ತಾರೆ. ರವಿಚಂದ್ರನ್, ಉಪೇಂದ್ರ, ಶಿವರಾಜ್ ಕುಮಾರ್ ಮತ್ತಿತರ ನಟರ ಚಿತ್ರಗಳ ಸೋಲಿಗೆ ಇದೇ ಕಾರಣ. ನಾನು ಇಂದಿಗೂ ಪ್ರಸ್ತುತ ಎಂದು ಸಾಬೀತು ಮಾಡುವ ಅನಿವಾರ್ಯತೆ ನಮ್ಮ ಹೀರೋಗಳಿಗೆ ಇದ್ದೇ ಇದೆ. ಕನ್ನಡದ ರಮೇಶ್ ಅರವಿಂದ್, ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಜಾಣರು.
ತ್ಯಾಗರಾಜನ ಪಾತ್ರ ಬೋರ್ ಆಯ್ತು ಗುರುವೇ..ಎಂದು ಪ್ರೇಕ್ಷಕರು ಗೊಣಗುತ್ತಿದ್ದಂತೆಯೇ, ಒಂದಷ್ಟು ಕಾಮಿಡಿ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅಭಿನಯದ ಜೊತೆ ತೆರೆಹಿಂದೆ ನಿಂತುಕೊಂಡು ನಿರ್ದೇಶನ ಮಾಡಿದರು. ರಮೇಶ್ ಗೆದ್ದರು. ರವಿ ಬೆಳಗೆರೆ ಹೇಳುವಂತೆ ಗೆಲುವಿನ ಓಟ ನಿರಂತರ. ರಮೇಶ್ ವಾಟ್ ನೆಕ್ಸ್ಟ್ ಎನ್ನುವುದಕ್ಕೆ ಮುನ್ನವೇ ಕಿರುತೆರೆಗೆ ಅವರು ನುಗ್ಗಿದ್ದಾರೆ. ಅಲ್ಲೊಂದು ಮ್ಯಾಜಿಕ್ ಮಾಡಲು ತಲೆ ಕೆಡಿಸಿಕೊಂಡಿದ್ದಾರೆ.
ಪಾರ್ವತಿ, ಅಂಬಿಕಾ, ಕುಂಕುಮಭಾಗ್ಯ, ಗೀತಾಂಜಲಿ ಮತ್ತಿತರ ಸವಕಲು ಸೀರಿಯಲ್ ಗಳ ಕಂಡು ಕಂಗೆಟ್ಟ ವೀಕ್ಷಕರು, ಟಿ.ಎನ್.ಸೀತಾರಾಂರ ಹಳೇ ಹಾಡು ಕೇಳಿ ಸಾಕಪ್ಪ ಸಾಕು ಎಂದ ವೀಕ್ಷಕರು,ಹೊಸತಿಗಾಗಿ ಹುಡುಕುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ ರಮೇಶ್ ನಿರ್ದೇಶನದ ಹೊಸ ಧಾರಾವಾಹಿ ಕಿರುತೆರೆ ಮೇಲೆ ಮೂಡಿ ಬರಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಧಾರಾವಾಹಿ, ಕುಮಾರಸ್ವಾಮಿ ಅವರ ಹೊಸ ಚಾನೆಲ್ ಕಸ್ತೂರಿಯಲ್ಲಿ ಪ್ರಸಾರವಾಗಲಿದೆ.
ರಮೇಶ್ ರ ಹೊಸ ಧಾರಾವಾಹಿಯ ಹೆಸರು ಡಿಟೆಕ್ಟಿವ್ ದ್ರೋಣ. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ಹಂಪಾಪುರ್(ಅನಂತನಾಗ್) ಪತ್ತೇದಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಫ್ಟ್ ವೇರ್ ರಂಗದಲ್ಲಿ ತೊಡಗಿಸಿಕೊಂಡಿರುವ ದೀಪಕ್ ಮತ್ತು ಹರ್ಷ ಧಾರಾವಾಹಿಗಾಗಿ ಕತೆ ಬರೆಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನೆರಡು ತಿಂಗಳೊಳಗೆ, ಡಿಟೆಕ್ಟಿವ್ ದ್ರೋಣನಿಮ್ಮ ಮುಂದೆ.
ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಬಗ್ಗೆ ಓದುಗರು ತಮ್ಮ ಅಭಿಪ್ರಾಯ ಬರೆಯಬಹುದು.