Don't Miss!
- News Heavy Rain: ಸಕ್ಕರೆ ನಾಡಿನಲ್ಲಿ ವರ್ಷದ ಮೊದಲ ಮಳೆ: ಧರೆಗುರುಳಿದ ಮರ, ಕಮಾನುಗಳು
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Sports PBKS vs MI IPL 2024: ಸೂರ್ಯಕುಮಾರ್ ಶೈನಿಂಗ್; ಪಂಜಾಬ್ಗೆ ಸವಾಲಿನ ಗುರಿ ನೀಡಿದ ಮುಂಬೈ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗಕ್ಕೆ ಮರಳಿದ ಆರತಿ ಛಾಬ್ರಿಯಾ
''ದಕ್ಷಿಣ ಭಾರತ ಚಿತ್ರರಂಗದೊಂದಿಗೆ ನಾನು ಸಂಬಂಧ ಕಳೆದುಕೊಂಡಿಲ್ಲ. ದಕ್ಷಿಣದ ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದೇನೆ.ಈ ಸಲ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಅದರಲ್ಲೂ ಮುಖ್ಯವಾಗಿ ನನ್ನ ನೆಚ್ಚಿನ ಸ್ಟಾರ್ ಶಿವರಾಜ್ ಕುಮಾರ್ ಜತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಸಂತ ಚಿತ್ರ ಬಾಕ್ಸಾಫೀಸಲ್ಲಿ ಗೆದ್ದ ನಂತರ ತೆಲುಗು ಚಿತ್ರರಂಗದಲ್ಲಿ ಹಲವಾರು ಅವಕಾಶ ಹುಡುಕಿಕೊಂಡುಬಂದವು. ಆದರೆ ಯಾವುದನ್ನೂ ಒಪ್ಪಲಿಲ್ಲ. ಅಷ್ಟೇ ಅಲ್ಲ ಈ ಒಂದು ವರ್ಷದಲ್ಲಿ ಯಾವುದೇ ಬಾಲಿವುಡ್ ಚಿತ್ರಕ್ಕೂ ಸಹಿ ಹಾಕಿಲ್ಲ. ನನಗೆ ಒಪ್ಪುವ ಪಾತ್ರಗಳು ಸಿಗದೇ ಇದ್ದದ್ದೇ ಇದಕ್ಕೆ ಕಾರಣ. ಪ್ರಸ್ತುತ ರಾಜ್ ಕುಮಾರ್ ಸಂತೋಷಿ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನಟಿಸಲು ಇನ್ನೂ 'ಎಸ್' ಎಂದು ಹೇಳಿಲ್ಲ'' ಎಂದು ಆರತಿ ತಿಳಿಸಿದರು.
'ಹೊಡಿಮಗ' ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಆರತಿ ಛಾಬ್ರಿಯಾರೊಂದಿಗಿನ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ ಸೆಟ್ಟೇರಲಿದೆ. ಚೆನ್ನೈ, ಹೈದರಾಬಾದ್ ಮೆಟ್ರೋನಗರಗಳು ಸೇರಿದಂತೆ ತಿರುವನಂತಪುರಂನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಸಂತ ಚಿತ್ರದಲ್ಲಿನ ಆರತಿ ಮತ್ತು ಶಿವರಾಜ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮುಂದಿನ ಚಿತ್ರದಲ್ಲಿ ಮತ್ತೆ ಅದೇ ರೀತಿಯ ಪಾತ್ರಗಳಲ್ಲಿ ಇವರನ್ನೂ ನೋಡಬಹುದು ಎನ್ನುತ್ತಾರೆ ಚಿತ್ರ ನಿರ್ದೇಶಕ ಪಿ.ಎನ್.ಸತ್ಯ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಆರತಿ ಛಾಬ್ರಿಯಾ ಮನಮೋಹಕ ಗ್ಯಾಲರಿ