Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರಗಳಿಗೆ ಎಳ್ಳುನೀರು ಬಿಟ್ಟ ನಟಿ ತ್ರಿಶಾ ಕೃಷ್ಣನ್
ತಮಿಳು, ತೆಲುಗು ಚಿತ್ರಗಳಲ್ಲಿ ಮಿಂಚುತ್ತಿರುವ ಮಿಂಚಿನ ಬಳ್ಳಿ ತ್ರಿಶಾ ಕೃಷ್ಣನ್ ಕನ್ನಡ ಚಿತ್ರಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ತಾನು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಮುಂದೆ ನಟಿಸುವ ಯೋಚನೆಯೂ ತಮಗಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಈ ಹಿಂದೆ ಸಾಕಷ್ಟು ಸಲ ತ್ರಿಶಾ ಕನ್ನಡದಲ್ಲಿ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಸ್ವತಃ ತ್ರಿಶಾ ಮಾತನಾಡುತ್ತಾ ಕನ್ನಡದಲ್ಲಿ ನಟಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಮೂಲಕ ತ್ರಿಶಾ ಅವರು ಪುನೀತ್, ಶಿವಣ್ಣ ಜೊತೆ ನಟಿಸುತ್ತಾರೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ.
ತಾನು ಚೆನ್ನೈ ಹೈದರಾಬಾದ್ ಎಂದು ಸುತ್ತುತ್ತಿರುತ್ತೇನೆ. ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ನಿಜವಾಗಿಯೂ ನನಗೆ ಟೈಮಿಲ್ಲ. ಸುಖಾ ಸುಮ್ಮನೆ ಚಿತ್ರಗಳನ್ನು ಒಪ್ಪಿಕೊಂಡು ಗೊಂದಲ ಸೃಷ್ಟಿಸಲು ನನಗೆ ಇಷ್ಟವಿಲ್ಲ ಎಂದು ಗೋಣುಮುರಿದ್ದಾರೆ.
ಪುನೀತ್ ಜೊತೆ 'ಲಗೋರಿ', ಕನ್ನಡದ 'ರಸಗುಲ್ಲ', ಶಿವರಾಜ್ ಕುಮಾರ್ ಅವರ 'ಸಿಎಂ', ದರ್ಶನ್ ಅವರ 'ಸ್ನೇಹಿತರು' ಚಿತ್ರಗಳಲ್ಲಿ ತ್ರಿಶಾ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಈಗ ಎಲ್ಲವೂ ಸುಳ್ಳಾಗಿದೆ. ಮುಂದೊಂದು ದಿನ ಆಕೆಯ ಜನಪ್ರಿಯತೆ ಕುಗ್ಗಿದಾಗ ಕನ್ನಡದ ಕಡೆ ಮುಖಮಾಡಬಹುದೋ ಏನೋ. ಕಾದು ನೋಡೋಣ. (ಒನ್ಇಂಡಿಯಾ ಕನ್ನಡ)