ದರ್ಶನ್ ರ ಕಣ್ಣಂಚಲಿ ಏನೇನೋ ಖುಷಿ!

ಮುಖ್ಯವಾಗಿ ದರ್ಶನ್ ಈ ವರ್ಷ ಅಪ್ಪ ಎನ್ನಿಸಿಕೊಂಡರು. ಈ ವರ್ಷದ ಸಡಗರ ಸಂಭ್ರಮ ಮುಂದಿನ ವರ್ಷಕ್ಕೂ ಮುಂದುವರಿಯುತ್ತ್ತದೆ ಎಂಬ ವಿಶ್ವಾಸದಲ್ಲಿ ದರ್ಶನ್ ಇದ್ದಾರೆ. ಅವರ ಮುಂದಿನ ಚಿತ್ರ ಅಭಯ್ ಡಿ.5ರಂದು ಸೆಟ್ಟೇರುತ್ತಿದೆ. ಈ ಚಿತ್ರದಲ್ಲೂ ದರ್ಶನ್ ರ ಸಾಹಸ ಮತ್ತು ಅದ್ಭುತ ಸಂಭಾಷಣೆ ಮುಂದುವರಿಯಲಿದೆ. ಹುಡುಗಾಟ ಚಿತ್ರದ ನಿರ್ಮಾಪಕ ಬಾಬು ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಹೇಶ್ ಬಾಬು ನಿರ್ದೇಶಕ. ನಾಯಕಿಗಾಗಿ ಹುಡುಕಾಟ ನಡೆದಿದೆ. ಛಾಯಾಗ್ರಹಣ ರಮೇಶ್ ಬಾಬು, ಸಂಗೀತ ಹರಿಕೃಷ್ಣ ಅವರದು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications