Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಕರಿಬಸವಯ್ಯ ಕಾರು ಅಪಘಾತಕ್ಕೀಡಾಗಿದ್ದು ಹೇಗೆ?
"ಅಪಘಾತಕ್ಕೀಡಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವನನ್ನು ನಾವೆಲ್ಲಾ ಕೆಬಿ ಎಂದೇ ಕರೆಯುತ್ತಿದ್ದೆವು. ನೋಡಲು ಹೋದಾಗ ಗೊಳೋ ಎಂದು ಅಳುತ್ತಿದ್ದ. ನನ್ನ ಬಳಿ ಏನೂ ಮಾತನಾಡಲಿಲ್ಲ. ಕೇವಲ ಕಣ್ಣೀರು. ಏನೂ ಆಗಲ್ಲ ಸುಮ್ಮನಿರೋ ಎಂದು ಸಮಾಧಾನ ಮಾಡಿದ್ದೆ. ಅವನ ಪರಿಸ್ಥಿಯನ್ನು ನೋಡಿ ಅಲ್ಲಿ ಹೆಚ್ಚು ಹೊತ್ತು ಇರಲಿಕ್ಕೆ ಆಗಲಿಲ್ಲ.
ಫೆಬ್ರವರಿ 7ರಂದು ನನ್ನದೊಂದು ಕಾರ್ಯಕ್ರಮವಿತ್ತು. ಅದಕ್ಕೆ ತಪ್ಪದೆ ಬರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದ. ಬಹುಶಃ ಅದನ್ನು ನೆನೆಸಿಕೊಂಡು ಅಳುತ್ತಿದ್ದ ಎಂದು ಕಾಣುತ್ತದೆ. ಅವನು ಯಾರದೋ ನಾಮಕರಣ ಸಮಾರಂಭಕ್ಕೆ ಹೋಗಬೇಕಾಗಿತ್ತು. ಆದರೆ ಸಮಯಕ್ಕೆ ಹೋಗಲು ಆಗಿರಲಿಲ್ಲ. ಸರಿ ಎಂದು ಅವರಿಗೆ ವಿಶ್ ಮಾಡಲು ರಾತ್ರಿ 12 ಗಂಟೆಗೆ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ.
ಅರ್ಧರಾತ್ರಿಯಲ್ಲಿ ಕರಿಬಸವಣ್ಣ ಬಂದದ್ದನ್ನು ನೋಡಿ ಮನೆಯವರಿಗೆಲ್ಲಾ ಖುಷಿಪಟ್ಟಿದ್ದರು. ರಾತ್ರಿ ಇಲ್ಲೇ ಉಳಿದು ಬೆಳಗ್ಗೆ ಹೋಗಿಯಣ್ಣ ಎಂದು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಬೆಳಗಿನ ಜಾವ 3ಕ್ಕೆ ಎಚ್ಚರವಾಗಿದೆ, ಹೊರಡಲು ಸಿದ್ಧನಾಗಿದ್ದಾನೆ. ಯಾಕಣ್ಣ ಇಷ್ಟೊತ್ತಿಗೆ ಹೋಗುತ್ತಿದ್ದೀರಾ. ಬೆಳಗ್ಗೆ 5 ಗಂಟೆಗೆ ಹೋಗಬಹುದಲ್ವಾ? ಎಂದಿದ್ದಾರೆ ಪರಿಚಯದವರು.