twitter
    For Quick Alerts
    ALLOW NOTIFICATIONS  
    For Daily Alerts

    ಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್

    By Staff
    |

    harish raj as kalakar
    ಕಾಸರವಳ್ಳಿ ಅವರ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಹರೀಶ್‌ರಾಜ್ ಅವರು ಕಮರ್ಷಿಯಲ್ ಚಿತ್ರಗಳಲ್ಲೂ ತಮ್ಮ ಅಭಿನಯದ ಕಮಾಲ್ ತೋರಿದ್ದರು. ಆದರೆ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲು ಸಾಧ್ಯವಾಗಿರಲಿಲ್ಲ. ಈಗ ಇವರ ಅಭಿನಯದ ಕಲಾಕಾರ್ ಚಿತ್ರದ ಚಿತ್ರೀಕರಣ ಕ್ಕೆ ನಗರದಲ್ಲಿ ಬಿರುಸಿನಿಂದ ನಡೆಯುತ್ತಿದೆ.

    ಇತ್ತೀಚೆಗೆ ಸ್ಯಾಂಕಿರಸ್ತೆ, ಬ್ರಿಗೇಡ್‌ರಸ್ತೆ. ಮಹಾತ್ಮಗಾಂಧಿರಸ್ತೆಗಳಲ್ಲಿ ಚಿತ್ರದ 'ಮನಸೆ ಯಾವ ರಾಗದಲ್ಲಿ ನಾ ಹಾಡಲಿ, ಒಲವ ಗೀತೆಯ. .'ಎಂಬ ಗೀತೆ ಚಿತ್ರೀಕೃತವಾಯಿತು. ವಿ.ಮನೋಹರ್ ಬರೆದಿರುವ ಈ ಗೀತೆಯನ್ನು ಸೂರ್ಯ ಮೂಡುವ ಹಾಗೂ ಮುಳುಗುವ ಸಮಯದ ಸುಂದರ ವಾತಾವರಣದಲ್ಲಿ ಛಾಯಾಗ್ರಾಹಕ ಎಚ್.ಎಂ.ರಾಮಚಂದ್ರ ಸೆರೆಹಿಡಿದಿದ್ದಾರೆ. ಮಂಗಳ ಮತ್ತು ರಾಜೇಶ್‌ಕೃಷ್ಣನ್ ಹಾಡಿರುವ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಹರೀಶ್‌ರಾಜ್ ಹಾಗೂ ರಾಧಿಕಾಗಾಂಧಿ ಭಾಗವಹಿಸಿದ್ದರು.

    ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹರೀಶ್‌ರಾಜ್ ಅವರು 'ದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ' ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದ್ದಲ್ಲದೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಕತೆ, ಚಿತ್ರಕತೆಯನ್ನೂ ಬರೆದಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸುಮನ್‌ರಂಗನಾಥ್, ರಾಧಿಕಾಗಾಂಧಿ, ಸುಧಾನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜಾರಾವ್, ವಿಶ್ವ ಕಾಣಿಸಲಿದ್ದಾರೆ.

    (ದಟ್ಸ್ ಸಿನಿವಾರ್ತೆ)

    Sunday, January 4, 2009, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X