Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್
ಇತ್ತೀಚೆಗೆ ಸ್ಯಾಂಕಿರಸ್ತೆ, ಬ್ರಿಗೇಡ್ರಸ್ತೆ. ಮಹಾತ್ಮಗಾಂಧಿರಸ್ತೆಗಳಲ್ಲಿ ಚಿತ್ರದ 'ಮನಸೆ ಯಾವ ರಾಗದಲ್ಲಿ ನಾ ಹಾಡಲಿ, ಒಲವ ಗೀತೆಯ. .'ಎಂಬ ಗೀತೆ ಚಿತ್ರೀಕೃತವಾಯಿತು. ವಿ.ಮನೋಹರ್ ಬರೆದಿರುವ ಈ ಗೀತೆಯನ್ನು ಸೂರ್ಯ ಮೂಡುವ ಹಾಗೂ ಮುಳುಗುವ ಸಮಯದ ಸುಂದರ ವಾತಾವರಣದಲ್ಲಿ ಛಾಯಾಗ್ರಾಹಕ ಎಚ್.ಎಂ.ರಾಮಚಂದ್ರ ಸೆರೆಹಿಡಿದಿದ್ದಾರೆ. ಮಂಗಳ ಮತ್ತು ರಾಜೇಶ್ಕೃಷ್ಣನ್ ಹಾಡಿರುವ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಹರೀಶ್ರಾಜ್ ಹಾಗೂ ರಾಧಿಕಾಗಾಂಧಿ ಭಾಗವಹಿಸಿದ್ದರು.
ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹರೀಶ್ರಾಜ್ ಅವರು 'ದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ' ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದ್ದಲ್ಲದೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಕತೆ, ಚಿತ್ರಕತೆಯನ್ನೂ ಬರೆದಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸುಮನ್ರಂಗನಾಥ್, ರಾಧಿಕಾಗಾಂಧಿ, ಸುಧಾನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜಾರಾವ್, ವಿಶ್ವ ಕಾಣಿಸಲಿದ್ದಾರೆ.
(ದಟ್ಸ್ ಸಿನಿವಾರ್ತೆ)