Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗದಲ್ಲೊಂದು ಖತರ್ನಾಕ್ ಚಿತ್ರ
ಒಂದು ವಿಭಿನ್ನ ಚಿತ್ರಕತೆಯನ್ನು ನಿರ್ದೇಶಕ ಹ ಸು ರಾಜಶೇಖರ್ ಕೈಗೆತ್ತಿಕೊಂಡಿದ್ದಾರೆ. ನಾಲ್ಕು ಮಂದಿ ಹೀರೋಗಳನ್ನು ಹಾಕಿಕೊಂಡು ಬಹುತಾರಾಗಣದ ಚಿತ್ರವೊಂದಕ್ಕೆ ಆಕ್ಷನ್, ಕಟ್ ಹೇಳಲು ಹೊರಟಿದ್ದಾರೆ. ಚಿತ್ರದ ಹೆಸರು ಖತರ್ನಾಕ್! ಆದರೆ ಇದು ತೆಲುಗಿನ 'ಖತರ್ನಾಕ್' ಅಲ್ಲ.
'ಶಿಷ್ಯ' ದೀಪ, 'ಗಂಡ ಹೆಂಡತಿ' ತಿಲಕ್, 'ಲೋಕವೆ ಹೇಳಿದ ಮಾತಿದು' ರವಿತೇಜ, 'ಕಾಳಿದಾಸ ಲವಲ್ಲಿ ಬಿದ್ದ' ಅಮಿತ್, 'ಟೆನ್ತ್ ಕ್ಲಾಸ್' ಪ್ರವೀಣ್ ಚಿತ್ರದ ನಾಯಕ ನಟರು. ಈ ನಾಲ್ಕು ಮಂದಿ ಹೀರೋಗಳಿಗೆ ಖಳ ನಾಯಕ ಒಬ್ಬನೇ ಆದಿ ಲೋಕೇಶ್. ಅವರದು ಚಿತ್ರದಲ್ಲಿ ಖತರ್ನಾಕ್ ರೋಲ್ ಅಂತೆ.
ಇತ್ತೀಚೆಗೆ ಹ ಸು ರಾಜಶೇಖರ್ ನಿರ್ದೇಶಿಸಿದ್ದ 'ಶಾಕ್' ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿತ್ತು. ಹಿಂದಿ ಚಿತ್ರ 'ಕೌನ್' ರೀಮೇಕ್ ಆಗಿದ್ದ ಈ ಚಿತ್ರದ ಸೋಲು ರಾಜಶೇಖರ್ ಅವರನ್ನು ಮೂಲೆಗುಂಪು ಮಾಡಿತ್ತು. ವಿಷಯ ಹೀಗಿದ್ದರೂ ಚಿತ್ರಕ್ಕೆ ಬಂಡವಾಳ ಹೂಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರೆ. ಅವರ ಭಂಡ ಧೈರ್ಯವನ್ನು ಮೆಚ್ಚಲೇಬೇಕು.
ಆ ಇಬ್ಬರು ನಿರ್ಮಾಪಕರ ಹೆಸರು ಅಮರಚಂದ್ ಜೈನ್ ಮತ್ತು ವಿಜಯ್ ಸುರಾನಾ. ನಿರಂಜನ್ ಬಾಬು ಅವರ ಛಾಯಾಗ್ರಹಣ ಎಚ್ ಎಸ್ ಮಾರುತಿ ಅವರ ಸಂಗೀತ ಚಿತ್ರಕ್ಕಿರುತ್ತದೆ. ಸುಮಾ ಗುಹಾ ಚಿತ್ರದ ನಾಯಕಿ. ಸಂಜಯ್ ದತ್ ಮುಖ್ಯಭೂಮಿಕೆಯಲ್ಲಿರುವ 'ಪ್ಲಾನ್' ಚಿತ್ರದ ರೀಮೇಕ್ ಇದು ಎನ್ನುತ್ತವೆ ಮೂಲಗಳು.
ಚಿತ್ರದ ನಾಯಕಿ ಬಗ್ಗೆ ಹೇಳಬೇಕು ಎಂದರೆ ಈಕೆ ಈಗಾಗಲೆ ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಪ್ರೀತಿಯಿಂದ ರಮೇಶ್' ಮತ್ತು 'ಶಾಕ್' ಚಿತ್ರಗಳಲ್ಲಿ ನಟಿಸಿದ್ದರು. ಶೋಭಾರಾಜ್, ಬ್ಯಾಂಕ್ ಜನಾರ್ದನ್, ಕುರಿಗಳು ಪ್ರತಾಪ್ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ.