Don't Miss!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೊತೆಜೊತೆಯಲಿ ರಿಯಲ್ ಸ್ಟಾರ್ ಉಪೇಂದ್ರ- ಕಿಚ್ಚ ಸುದೀಪ್
ಈ ಹೊಸ ವಿಷಯ ಏನಂದ್ರೆ... ಈ ಇಬ್ಬರೂ ಸದ್ಯದಲ್ಲಿಯೇ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಈ ವಿಷಯ ಸ್ವತಃ ಉಪ್ಪಿ ಬಾಯಿಂದಲೇ ಬಂದಿರುವುದರಿಂದ ಸಂದೇಹಕ್ಕೆ ಆಸ್ಪದವೇ ಇಲ್ಲ. ಇಬ್ಬರ ಅಭಿಮಾನಿಗಳಿಗೂ ಈ ಸುದ್ದಿಯಿಂದ ರೋಮಾಂಚನ ಗ್ಯಾರಂಟಿ.
ಸುದೀಪ್ 38ನೇ ಹುಟ್ಟುಹಬ್ಬದ ದಿನ ಈ ವಿಷಯ ದೃಢಪಟ್ಟಿದ್ದು, ಇತ್ತೀಚಿಗೆ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದ್ದ ಸುದೀಪ್ ರ 'ಕೆಂಪೇಗೌಡ' ನೋಡಿ ತಾವು ಸಾಕಷ್ಟು ಪ್ರಭಾವಿತರಾಗಿದ್ದಾಗಿ ಉಪೇಂದ್ರ ಹೇಳಿಕೊಂಡರು.
"ಭೇಟಿಯಾದಾಗಲೆಲ್ಲ ಇಬ್ಬರೂ ಒಟ್ಟಿಗೆ ಕೆಲಸಮಾಡುವ ಬಗ್ಗೆ ಮಾತಾಡಿಕೊಳ್ತಾ ಇದ್ವಿ. ಆದರೆ ಕಾಲ ಈಗ ಕೂಡಿ ಬಂದಿದೆ" ಎಂದ ಉಪ್ಪಿ ಮಾತಿಗೆ ದನಿಗೂಡಿಸಿದ ಸುದೀಪ್, ಮೊದಲ ಬಾರಿಗೆ ಉಪ್ಪಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ತಂದಿದೆ ಎಂದಿದ್ದಾರೆ.
ಸದ್ಯಕ್ಕೆ ಈ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. 'ಆರಕ್ಷಕ' ಶೂಟಿಂಗ ಮುಗಿಸಿ ಇದೀಗ 'ಗಾಡ್ ಫಾದರ್' ನಲ್ಲಿ ಉಪೇಂದ್ರ ತೊಡಗಿಸಿಕೊಂಡಿದ್ದರೆ 'ವಿಷ್ಣುವರ್ಧನ','ಈಗ' ಮತ್ತು 'ವರದನಾಯಕ' ಚಿತ್ರಗಳಲ್ಲಿ ಸುದೀಪ್ ಬ್ಯುಸಿ!
ಹಾಗಾಗಿ
ಕೈಯಲ್ಲಿರುವ
ಚಿತ್ರಗಳನ್ನು
ಮುಗಿಸಿ
ನಂತರ
ಈ
ಇಬ್ಬರೂ
ಒಂದಾಗಿ
ಕೆಲಸ
ಮಾಡಲಿದ್ದಾರೆ.
ಬರಲಿರುವ
ಆ
ಚಿತ್ರದ
ಸ್ಕ್ರಿಪ್ಟ್
ಕೆಲಸ
ನಡೆಯುತ್ತಿದ್ದು
ಟೈಟಲ್
ಇನ್ನೂ
ನಿರ್ಧಾರವಾಗಬೇಕಿದೆ.
ಸಿನಿಪ್ರಿಯರಿಗೆ
ಸದ್ಯದಲ್ಲಿಯೇ
ಸಂತಸದ
ಸುಗ್ಗಿ...