Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಿಬಸವಯ್ಯ ಕಾರು ಆಕ್ಸಿಡೆಂಟ್; ಡಿಂಗ್ರಿ ಹೇಳಿದ ಸತ್ಯ
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಆಕ್ಷನ್ ಫಿಲಂನಲ್ಲಿ ತೋರಿಸುವಂತೆ ಉರುಳಿಕೊಂಡು ಹೋಗಿ ಕೆಳಗೆ ಬಿದ್ದಿದೆ. ಬಳಿಕ 5 ಗಂಟೆ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಪಾರಿ ಹುಡುಗರು ಕೆಳಗೆ ಬಿದ್ದಿದ್ದ ಕಾರಿನ ಇಂಡಿಕೇಟರ್ ಮಿಣಮಿಣ ಎನ್ನುತ್ತಿರುವುದನ್ನು ನೋಡಿದ್ದಾರೆ. ಯಾವುದೋ ಕಾರು ಕೆಳಗೆ ಬಿದ್ದಿದೆ ಬನ್ರೋ ಎಂದು ಹೋಗಿ ನೋಡಿದ್ದಾರೆ.
ಕರಿಬಸವಯ್ಯನದೇ ಮೊಬೈಲನ್ನು ತೆಗೆದುಕೊಂಡು ಅವರು ಕೊನೆಯದಾಗಿ ಮಾಡಿದ್ದ ಕರೆಗೆ ಫೋನು ಮಾಡಿದ್ದಾರೆ (ಕೆಬಿ ಕೊನೆಯದಾಗಿ ಅವರ ಪತ್ನಿಗೆ ಫೋನು ಮಾಡಿದ್ದರು). ಇಂತಹ ಕಡೆ ಕಾರು ಅಪಘಾತವಾಗಿದೆ. ಕಾರಿನಲ್ಲಿರುವ ವ್ಯಕ್ತಿ ಏನಾಗಿದ್ದಾನೋ ಗೊತ್ತಿಲ್ಲ. ದಯವಿಟ್ಟು ಬನ್ನಿ ಎಂದು ಎಲ್ಲ ವಿವರಗಳನ್ನೂ ಹೇಳಿದ್ದಾನೆ. ಕಾರು ಉರುಳಿಬಿದ್ದ ರಭಸಕ್ಕೆ ಕೆಬಿ ತಲೆ ಎರಡು ಸೀಟುಗಳ ನಡುವೆ ಸಿಕ್ಕಿಹಾಕಿಕೊಂಡಿತ್ತಂತೆ.
ಬಳಿಕ ಕರೆ ಮಾಡಿದ ಹುಡುಗ ಮೊಬೈಲ್ ಫೋನ್ನಿಂದ ಸಿಮ್ ತೆಗೆದು ಬಿಸಾಕಿ. ಮೊಬೈಲ್ ಸಮೇತ ಪರಾರಿಯಾಗಿದ್ದಾನೆ. ಬಳಿಕ ಅದೇ ರಸ್ತೆಯಲ್ಲಿ 6 ಗಂಟೆ ಸುಮಾರಿಗೆ ಬೆಳಗ್ಗೆ ಅವರನ್ನು 5 ಗಂಟೆಗೆ ಹೋಗಿ ಎಂದು ತಡೆದಿದ್ದ ವ್ಯಕ್ತಿ ಬಂದಿದ್ದಾರೆ. ಕಾರನ್ನು ನೋಡಿದವರೆ ಅಯ್ಯೋ ನಮ್ಮ ಕರಿಬಸವಣ್ಣನದಲ್ವೇ ಎಂದು ಹೋಗಿ ನೋಡಿದ್ದಾನೆ. ಪರಿಸ್ಥಿತಿ ಗೊತ್ತಾಗಿದೆ. ಅಲ್ಲೇ ಯಾವುದೋ ಸ್ಕಾರ್ಫಿಯೋ ಕಾರು ಹಿಡಿದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಮುಂದಿನದೆಲ್ಲಾ ನಿಮಗೆ ಗೊತ್ತೇ ಇದೆ. ಐದಾರು ತಿಂಗಳಲ್ಲಿ ಅವನು ಚೇತರಿಸಿಕೊಳ್ಳುತ್ತಾನೆ ಎಂದುಕೊಂಡಿದ್ದೆವು. ಆದರೆ ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಡಿಂಗ್ರಿ ಮೌನಕ್ಕೆ ಶರಣಾದರು.