ವಿಷ್ಣುಸೇನೆ ಖಳನಟನ ಪಜೇರೊ ಕಾರು ಕಳುವು
ಕನ್ನಡದ ಎರಡು ಚಿತ್ರಗಳಲ್ಲಿ ಅಭಿನಯಿಸಿರುವ ಬಾಲಿವುಡ್ ನಟ ಅಶುತೋಷ್ ರಾಣಾ ಅವರ ಕಾರು ಕಳುವಾಗಿದೆ. "ದಯವಿಟ್ಟು ತಮ್ಮ ಕಾರು ಯಾರ ಕಣ್ಣಿಗಾದರೂ ಬಿದ್ದರೆ ತಿಳಿಸಿ" ಎಂದು ಕಾರಿನ ವಿವರಗಳನ್ನು ನೀಡಿ ಎಂದು ಟ್ವೀಟ್ ಮಾಡಿದ್ದಾರೆ ಅಶುತೋಷ್ ರಾಣಾ. ತೆಲುಗಿನಲ್ಲಿ ಖಳನಟನಾಗಿಯೂ ಅಶುತೋಷ್ ಗುರುತಿಸಿಕೊಂಡಿದ್ದಾರೆ.
"ನನ್ನ ಕೆಂಪು ಮತ್ತು ಶ್ವೇತ ವರ್ಣದ ಪಜೇರೊ MH02BD7075 ಕಾರು ಮಂಗಳವಾರ ಬೆಳಗ್ಗೆ ಕಳುವಾಗಿದೆ. ಈ ಸಂಖ್ಯೆಯ ಕಾರು ಯಾರ ಕಣ್ಣಿಗಾದರೂ ಬಿದ್ದರೆ ದಯವಿಟ್ಟು ನನಗೆ ಟ್ವೀಟ್ ಮಾಡಿ" ಎಂದಿದ್ದಾರೆ. ಆತನ ಪತ್ನಿ ಹಾಗೂ ನಟಿ ರೇಣುಕಾ ಶಹಾನೆ ಸಹ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ.
ಈ ಹಿಂದೊಮ್ಮೆ ರಾಣಾ ಅವರ ಪಾಸ್ ಫೋರ್ಟ್ ಹಾಗೂ ವಿದೇಶಿ ಕರೆನ್ಸಿ ಕೂಡ ಕಳುವಾಗಿತ್ತು. ಕನ್ನಡದ ವಿಷ್ಣುಸೇನೆ ಹಾಗೂ ಕ್ಷಣ ಕ್ಷಣ ಎಂಬ ಎರಡು ಚಿತ್ರಗಳಲ್ಲಿ ಅಶುತೋಷ್ ಅಭಿನಯಿಸಿದ್ದಾರೆ. ಸ್ಟಾರ್ ಪ್ಲಸ್ನ "ಕಾಲಿ-ಏಕ್ ಅಗ್ನಿಪರೀಕ್ಷಾ" ಎಂಬ ಧಾರಾವಾಹಿಯಲ್ಲೂ ಅಭಿನಯಿಸಿದ್ದರು.
More from Filmibeat
English summary
Ashutosh Rana’s car was stolen this morning (May 3) in Mumbai and he tweeted the news in the hope that someone would spot it and inform him. "My red and white Pajero MH02BD7075 has been stolen early morning. If anybody sees it, pls let me know," Ashutosh posted on his Twitter page.


Click it and Unblock the Notifications











