Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಸ್ಟರ್ ಕಣ್ಣೀರು ಕಂಡು ಸಾಯೋಕೋದ
'ಪುತ್ರಶೋಕಂ ನಿರಂತರಂ ' ಎಂಬ ಉಕ್ತಿಯಂತೆ ಕರ್ನಾಟಕ ಸುಪುತ್ರ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಅಗಲಿಕೆಯ ನೋವು ಸಾರ್ವಜನಿಕವಾಗಿ ತಗ್ಗಿದ್ದರೂ, ಅವರ ಕಟ್ಟಾಭಿಮಾನಿಗಳು ಮಾತ್ರ ಹೃದಯದಲ್ಲೇ ನೋವನ್ನು ಅಡಗಿಸಿಕೊಂಡು ವಿಷ್ಣು ಅವರನ್ನು ಚಿತ್ರಗಳಲ್ಲಿ ಕಾಣುತ್ತಾ ಕಾಲದೂಡುತ್ತಿದ್ದಾರೆ. ಅದರಲ್ಲೂ ವಿಷ್ಣು ಅವರು ಕಾಲವಾದ ನಂತರ ಇತ್ತೀಚಿಗೆ ಬಿಡುಗಡೆಗೊಂಡ ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಸಾವು ನೋವು ಗರಿಷ್ಠ ಪ್ರಮಾಣದಲ್ಲಿ ತೆರೆಯನ್ನು ಆವರಿಸಿರುವ ಪರಿಣಾಮ ಅಭಿಮಾನಿಗಳ ಎದೆಯಾಳದ ನೋವು ಒಂದಲ್ಲ ಒಂದು ಸ್ಫೋಟಗೊಳ್ಳುತ್ತಲೇ ಇದೆ.
ಇದಕ್ಕೆ ನಿದರ್ಶನ ಎಂಬಂತೆ ಡಾ. ವಿಷ್ಣುವರ್ಧನ್ ಅಗಲಿಕೆಯಿಂದ ನೊಂದ ಅಭಿಮಾನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ. ತಿಪಟೂರಿನ ದೊಡ್ಡಪೇಟೆಯ ಆಟೋಚಾಲಕ ಸುಂದರ್ ಆತ್ಮಹತ್ಯೆಗೆ ಯತ್ನಿಸಿದವ. ವಿಷ್ಣು ಸಿನಿಮಾಗಳನ್ನು ನೋಡುತ್ತಿದ್ದ ಈತ ತನ್ನ ಆಟೋಗೆ ವಿಷ್ಣು ಫೋಟೋಗಳನ್ನು ಅಂಟಿಸಿದ್ದ. ವಿಷ್ಣು ಚಿತ್ರಗಳನ್ನು ತಪ್ಪದೇ ತಾನು ನೋಡಿ ತನ್ನ ಸ್ನೇಹಿತರಿಗೂ ತೋರಿಸುತ್ತಿದ್ದ.
ವಿಡಿಯೋ:ಡಾ. ವಿಷ್ಣುವರ್ಧನ್ ಅಗಲಿಕೆ, ಆಘಾತ
ವಿಷ್ಣು ಅಗಲಿಕೆ ದಿನದಿಂದ ಮನೆಯಲ್ಲಿ ಅವರ ಭಾವಚಿತ್ರವಿಟ್ಟು ಪೂಜೆ ಮಾಡುತ್ತಿದ್ದ. ಸ್ಕೂಲ್ ಮಾಸ್ಟರ್ ಚಿತ್ರ ವೀಕ್ಷಿಸಿ ಮನೆಗೆ ಬಂದ ಸುಂದರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಪೋಷಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜಿಲ್ಲಾ ವಿಷ್ಣು ಸೇನಾ ಸಮಿತಿ ಆರ್. ಸಾಧ್ವೀನ್ಕುಮಾರ್ ಸೇರಿದಂತೆ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿ ಸುಂದರ್ ಆರೋಗ್ಯ ವಿಚಾರಿಸಿದ್ದಾರೆ.