ಮಾಲಾಶ್ರೀ ಬೇಡ ಅನ್ನಬೇಡಿ ಆಯಮ್ಮ ಈಗ ‘ಕಿರಣ್ ಬೇಡಿ’
ರಾಮು ಎಂಟರ್ಪ್ರೆೃಸಸ್ನ ಮೆಗಾ ಚಿತ್ರಗಳಾದ ಲಾಕಪ್ ಡೆತ್. ಸಿಂಹದ ಮರಿ, ಎಕೆ 47, ಕಲಾಸಿಪಾಳ್ಯ ಚಿತ್ರಗಳ ನಿರ್ದೇಶಕ ಓಂಪ್ರಕಾಶ್, ಈ ಹೊಸ ಚಿತ್ರದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಎಸ್ಪಿ ಭಾರ್ಗವಿ, ದುರ್ಗಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ಮಾಲಾಶ್ರೀ ಈ ಸಲ ಮತ್ತೆ ಖಾಕಿ ಧರಿಸಲಿದ್ದಾರೆ.
ಕಿರಣ್ ಬೇಡಿ ಅವರ ಜೀವನಚರಿತ್ರೆಯನ್ನು ಈ ಚಿತ್ರ ಆಧರಿಸಿದೆ. ಚಿತ್ರೀಕರಣ ಮೇ ತಿಂಗಳಲ್ಲಿ ಆರಂಭಗೊಳ್ಳಲಿದೆ. ಮಾಲಾಶ್ರೀ ಚಿತ್ರದ ಪರಿಣಾಮ ದರ್ಶನ್ ಅಭಿನಯದ, ರಾಮು ನಿರ್ಮಾಣದ ‘ಮಾಸ್ತಿ’ ಚಿತ್ರ ಮುಂದಕ್ಕೆ ಹೋಗಿದೆ.
ಪ್ರೀತಿಯ ಗಂಡ ರಾಮು, ಮಗಳು ಅನನ್ಯ, ಮಗ ಆರ್ಯ ಜೊತೆ ಮಾಲಾಶ್ರೀ ಅವರದು ‘ಗಂಡ-ಮನೆ-ಮಕ್ಕಳು’ ಎನ್ನುವಂತಹ ಸುಖಿ ಕುಟುಂಬ. ಗ್ಲಾಮರ್ ಪಾತ್ರಗಳ ಅಧ್ಯಾಯ ಮುಗಿಯಿದು ಎನಿಸುತ್ತಿದ್ದಂತೆಯೇ ಹೊಡಿಬಡಿ ಪಾತ್ರಗಳ ಮೂಲಕ ಕರ್ನಾಟಕದ ವಿಜಯಶಾಂತಿಯಾಗಲು ಮಾಲಾಶ್ರೀ ಪ್ರಯತ್ನಿಸಿ, ತುಸು ಯಶಸ್ಸನ್ನೂ ಪಡೆದವರು.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications