twitter
    For Quick Alerts
    ALLOW NOTIFICATIONS  
    For Daily Alerts

    ಅಪಘಾತಕ್ಕೆ ಅಂಬರೀಷ್‌ ಬೇಜವಾಬ್ದಾರಿ ಕಾರಣವೇ?

    By Staff
    |

    ಬೆಂಗಳೂರು : ರಸ್ತೆ ಅಪಘಾತದಲ್ಲಿ ಆಶ್ಚರ್ಯಕರವಾಗಿ ನಟ ಅಂಬರೀಷ್‌, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತಕ್ಕೆ ಸ್ಪಷ್ಪ ಕಾರಣಗಳು ಈವರೆಗೆ ತಿಳಿದು ಬಂದಿಲ್ಲ.

    ಮಂಗಳವಾರ ರಾತ್ರಿ 10ರ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಅತಿವೇಗದಿಂದ ಬಂದ ಅಂಬರೀಷ್‌ರ ಟೊಯೋಟಾ ಪ್ರಾಡೋ ಕಾರು, ಕಾವೇರಿ ಜಂಕ್ಷನ್‌ ಬಳಿ ರಮಣ ಮಹರ್ಷಿ ರಸ್ತೆ ವಿಭಜಕ ಹತ್ತಿ ಅಪಘಾತಕ್ಕೀಡಾಯಿತು. ಅಂಬರೀಷ್‌ ಕಾರಿನಿಂದ ಕೆಳಕ್ಕೆ ಬಿದ್ದರು. ಕ್ರೇನ್‌ ಸಹಾಯದಿಂದ ಕಾರನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.

    ಅಂದ ಹಾಗೆ, ಅಂಬರೀಷ್‌ ಕಾರಿನ ಡ್ರೆೃವಿಂಗ್‌ ಮಾಡುತ್ತಿದ್ದರು. ಡ್ರೆೃವಿಂಗ್‌ ಮಾಡುತ್ತಲೇ ಮೊಬೈಲ್‌ ಕರೆ ಸ್ವೀಕರಿಸಲು ಯತ್ನಿಸಿದಾಗ, ಹಿಡಿತ ತಪ್ಪಿ ಅಪಘಾತವಾಯಿತು ಎನ್ನಲಾಗಿದೆ. ಅಪಘಾತದ ನಂತರ ಇದೇ ರಸ್ತೆಯಲ್ಲಿ ಬರುತ್ತಿದ್ದ ಸ್ನೇಹಿತರ ಕಾರಿನಲ್ಲಿ, ಅಂಬರೀಷ್‌ ಮನೆಗೆ ತೆರಳಿದರು.

    ಕಾರಿನ ಮುಂಭಾಗದ ಎಡ ಚಕ್ರ ಪಂಕ್ಚರ್‌ ಆಗಿತ್ತು. ಇದು ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

    (ದಟ್ಸ್‌ ಕನ್ನಡ ವಾರ್ತೆ)

    Wednesday, April 24, 2024, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X