Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮಲ್ ಥರನೇ ನಟಿಸ್ತೀನಿ- ಸುದೀಪ್
- ದಟ್ಸ್ಕನ್ನಡ ಬ್ಯೂರೋ
ಪ್ರಿಯಾ ಸುದೀಪ್ ತಮ್ಮ ಗಂಡನಿಗೆ ಇರುವ ಅಪಾರ ಅಭಿಮಾನಿ ಬಳಗವನ್ನು ಕಣ್ಣುತುಂಬಿಕೊಂಡು ಬಂದು ನಿಂತಿದ್ದರು. ‘ನಾಯಗನ್’ ರೀಮೇಕ್‘ವರದ ನಾಯಕ’ ಚಿತ್ರದ ನಿರ್ಮಾಪಕ ಧನರಾಜ್ ಹಾಗೂ ಅವರ ಹೆಂಡತಿ ಇದ್ದರು. ಸದ್ಯಕ್ಕೆ ಕೈತುಂಬಾ ಕೆಲಸ ಗಿಟ್ಟಿಸಿಕೊಂಡಿರುವ ಸಂಗೀತ ಸಂಯೋಜಕ ದ್ವಯರಾದ ಗುರುಕಿರಣ್ ಹಾಗೂ ರಾಜೇಶ್ ರಾಮನಾಥನ್ ಒಳಗೊಳಗೇ ಯಾವುದೇ ರಾಗ ಗುನುಗುತ್ತಿದ್ದರು. ಡಿಐಜಿ ಶ್ರೀನಿವಾಸುಲು, ಕೆಸಿಎನ್ ಚಂದ್ರಶೇಖರ್ ಹಾಗೂ ಜಯಮಾಲ ಕುಟುಂಬ ಪಟ್ಟಾಂಗದಲ್ಲಿ ಭಾಗಿಗಳಾಗಿದ್ದರು.
ಸುದೀಪ್ ಮತ್ತೆ ಕಾಲೆಳೆಯುವವರ ಕುರಿತೇ ತಲೆಕೆಡಿಸಿಕೊಂಡಿದ್ದಾರೆ ಅನಿಸುತ್ತೆ. ‘ಡಿಸ್ಟ್ರಾಕ್ಟರ್ಗಳ ನಡುವೆಯೂ ಕಷ್ಟಪಟ್ಟು ಕೆಲಸ ಮಾಡಿ ಮೇಲೇರಬೇಕು ಎಂಬುದು ಚಿತ್ರಲೋಕಕ್ಕೆ ನಾನು ಬಂದಾಗ ಮಾಡಿಕೊಂಡ ಠರಾವು’ ಅಂತ ಅವರು ಯಾಕೆ ಹೇಳಿದರೋ ಗೊತ್ತಾಗಲಿಲ್ಲ. ‘ನಾಯಗನ್’ ಚಿತ್ರದಲ್ಲಿ ಕಮಲ ಹಾಸನ್ ಮಾಡಿದ ಪಾತ್ರವನ್ನು ಮಾಡುತ್ತಿರುವುದು ದೊಡ್ಡ ಸವಾಲು. ಅದನ್ನು ನಾನು ಗೆದ್ದು ತೋರಿಸುತ್ತೇನೆ ಎಂದು ಸುದೀಪ್ ಆತ್ಮವಿಶ್ವಾಸದಿಂದ ಬೀಗಿದರು.
ಸುದೀಪ್ ಅಭಿನಯದ ಪಾರ್ಥ ಚಿತ್ರ ತೆರೆ ಕಾಣಲು ಪೈಪ್ಲೈನ್ನಲ್ಲಿದೆ. ನನ್ನ ಮುಂದಿನ ಚಿತ್ರ ಶಿವಾಜಿ. ಇದು ಪಕ್ಕ ಕಮರ್ಷಿಯಲ್ ಚಿತ್ರ ಅನ್ನೋದು ಸುದೀಪ್ ಬರ್ತಡೇ ಪಾರ್ಟಿಯಲ್ಲಿ ಕೇಳಿಬಂದ ಅನೌನ್ಸ್ಮೆಂಟು.
ಮುಖಪುಟ / ಸ್ಯಾಂಡಲ್ವುಡ್