twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್‌ ಥರನೇ ನಟಿಸ್ತೀನಿ- ಸುದೀಪ್‌

    By Staff
    |
    • ದಟ್ಸ್‌ಕನ್ನಡ ಬ್ಯೂರೋ
    ಅಭ್ಯಂಜನ ಸ್ನಾನ ಮಾಡಿ ಹೆಂಡತಿಯ ಜೊತೆಗೆ ದೇವಸ್ಥಾನಕ್ಕೆ ಹೋಗಿ, ಭಗವಂತನಿಗೆ ಶಿರ ಸಾಷ್ಟಾಂಗ ವಂದಿಸಿ, ಸಂಜೆ 5 ಗಂಟೆಯವರೆಗೆ ಅಭಿಮಾನಿಗಳ ಬೊಕೆಗಳನ್ನು ಇಸಿದುಕೊಂಡು ಧನ್ಯವಾದ ಅರ್ಪಿಸಿ, ಆಮೇಲೆ ಬೆಂಗಳೂರಿನ ಕ್ಯಾಪಿಟಲ್‌ ಹೊಟೇಲಿನಲ್ಲಿ ಕೇಕ್‌ ಕಟ್‌- ಇದು ಮಂಗಳವಾರ (ಸೆ.02) ನಡೆಗ ಸುದೀಪ್‌ ಬರ್ತ್‌ಡೇ ಸಂಕ್ಷಿಪ್ತ ಮಾಹಿತಿ.

    ಪ್ರಿಯಾ ಸುದೀಪ್‌ ತಮ್ಮ ಗಂಡನಿಗೆ ಇರುವ ಅಪಾರ ಅಭಿಮಾನಿ ಬಳಗವನ್ನು ಕಣ್ಣುತುಂಬಿಕೊಂಡು ಬಂದು ನಿಂತಿದ್ದರು. ‘ನಾಯಗನ್‌’ ರೀಮೇಕ್‌‘ವರದ ನಾಯಕ’ ಚಿತ್ರದ ನಿರ್ಮಾಪಕ ಧನರಾಜ್‌ ಹಾಗೂ ಅವರ ಹೆಂಡತಿ ಇದ್ದರು. ಸದ್ಯಕ್ಕೆ ಕೈತುಂಬಾ ಕೆಲಸ ಗಿಟ್ಟಿಸಿಕೊಂಡಿರುವ ಸಂಗೀತ ಸಂಯೋಜಕ ದ್ವಯರಾದ ಗುರುಕಿರಣ್‌ ಹಾಗೂ ರಾಜೇಶ್‌ ರಾಮನಾಥನ್‌ ಒಳಗೊಳಗೇ ಯಾವುದೇ ರಾಗ ಗುನುಗುತ್ತಿದ್ದರು. ಡಿಐಜಿ ಶ್ರೀನಿವಾಸುಲು, ಕೆಸಿಎನ್‌ ಚಂದ್ರಶೇಖರ್‌ ಹಾಗೂ ಜಯಮಾಲ ಕುಟುಂಬ ಪಟ್ಟಾಂಗದಲ್ಲಿ ಭಾಗಿಗಳಾಗಿದ್ದರು.

    ಸುದೀಪ್‌ ಮತ್ತೆ ಕಾಲೆಳೆಯುವವರ ಕುರಿತೇ ತಲೆಕೆಡಿಸಿಕೊಂಡಿದ್ದಾರೆ ಅನಿಸುತ್ತೆ. ‘ಡಿಸ್ಟ್ರಾಕ್ಟರ್‌ಗಳ ನಡುವೆಯೂ ಕಷ್ಟಪಟ್ಟು ಕೆಲಸ ಮಾಡಿ ಮೇಲೇರಬೇಕು ಎಂಬುದು ಚಿತ್ರಲೋಕಕ್ಕೆ ನಾನು ಬಂದಾಗ ಮಾಡಿಕೊಂಡ ಠರಾವು’ ಅಂತ ಅವರು ಯಾಕೆ ಹೇಳಿದರೋ ಗೊತ್ತಾಗಲಿಲ್ಲ. ‘ನಾಯಗನ್‌’ ಚಿತ್ರದಲ್ಲಿ ಕಮಲ ಹಾಸನ್‌ ಮಾಡಿದ ಪಾತ್ರವನ್ನು ಮಾಡುತ್ತಿರುವುದು ದೊಡ್ಡ ಸವಾಲು. ಅದನ್ನು ನಾನು ಗೆದ್ದು ತೋರಿಸುತ್ತೇನೆ ಎಂದು ಸುದೀಪ್‌ ಆತ್ಮವಿಶ್ವಾಸದಿಂದ ಬೀಗಿದರು.

    ಸುದೀಪ್‌ ಅಭಿನಯದ ಪಾರ್ಥ ಚಿತ್ರ ತೆರೆ ಕಾಣಲು ಪೈಪ್‌ಲೈನ್‌ನಲ್ಲಿದೆ. ನನ್ನ ಮುಂದಿನ ಚಿತ್ರ ಶಿವಾಜಿ. ಇದು ಪಕ್ಕ ಕಮರ್ಷಿಯಲ್‌ ಚಿತ್ರ ಅನ್ನೋದು ಸುದೀಪ್‌ ಬರ್ತಡೇ ಪಾರ್ಟಿಯಲ್ಲಿ ಕೇಳಿಬಂದ ಅನೌನ್ಸ್‌ಮೆಂಟು.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 6:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X