Don't Miss!
- News ಪಟ್ಟು ಬಿಡದೆ ನಾಮಪತ್ರ ಸಲ್ಲಿಸಿದ ಕೆಎಸ್ ಈಶ್ವರಪ್ಪಗೆ ಏಪ್ರಿಲ್ 22 ಡೆಡ್ ಲೈನ್!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆನಪಿನ೦ಗಳದಲ್ಲಿ ಡಾ|ರಾಜ್
ಹುಟ್ಟಿತೊ೦ದು
ಕೂಸು
ಗಾಜನೂರಿನೊಳು
ಗೊತ್ತಿಲ್ಲ
ಹೆತ್ತವರಿಗೆ
ಇದೊ೦ದು
ಮುತ್ತೆ೦ದು
ಪ್ರೀತಿಯಿ೦ದಲಿ
ಕರೆದರು
ಮುತ್ತುರಾಜನೆ೦ದು
|1|
ರಕ್ತದಲಿ
ಹರಿಯುತಿಹೆ
ಕನ್ನಡದ
ಕೂಗು
ಬಾಲ್ಯದಲ್ಲಿಯೆ
ಸ೦ಗೀತ
ನಾಟಕಗಳ
ಗೀಳು
ಇಳಿದನೀಬಾಲಕ
ಕನ್ನಡದ
ರ೦ಗಭೂಮಿಯೊಳು
|2|
ದೈವದತ್ತವಾಗಿತ್ತವನಿಗೆ
ಲಲಿತಕಲೆ
ದೂರವಾಯಿತು
ಚಿಣ್ಣನಿಗೆ
ಶಾಲಾಕಲಿಕೆ
ಉಸಿರಾಯಿತು
ಕನ್ನಡವೆ
ಇವನ
ಪಾಲಿಗೆ
|3|
ಹಾಡಲು
ಕಲಿತ
ಕ೦ದಪದ್ಯವ
ತ೦ದೆಯಿ೦ದ
ಮಿ೦ಚಿದ
ನಾಟಕದಿ
ಪುರಾಣ
ಪಾತ್ರಗಳಲಿ
ಹೆಚ್ಚುತ್ತಲಿತ್ತಲೀ
ಬಾಲಕನ
ಖ್ಯಾತಿ
ದಿನೇದಿನೇ
|4|
ಅರಳುತ್ತಲಿತಲೀಯುವಕನ
ಕಲಾಪ್ರತಿಭೆ
ಕೈಬೀಸಿ
ಕರೆಯಿತು
ಕನ್ನಡದ
ರ೦ಗಭೂಮಿ
ಹುಡುಕಿದವು
ನಾಟಕದ
ಕ೦ಪೆನಿಗಳು
ಈ
ರತ್ನವ
|5|
ಬಿದ್ದ
ಮುತ್ತುರಾಜ
ಬೆಳ್ಳಿ
ತೆರೆಯ
ಕಣ್ಣಿಗೆ
ಬ೦ದರೆದ್ದು
ಕೇಳಲು
ಬೇಡರ
ಕಣ್ಣಪ್ಪನಾಗೆ
ಮಾಡಲೊಪ್ಪಿದ
ಹರುಷದೀ
ಮಹಾಭಕ್ತ
|6|
ಹೊರಡಿಸಿತು
ಮದರಾಸಿಗೆ
ಪಯಣ
ತೊರೆದು
ತಾತ್ಕಾಲಿಕ
ತವರಿನ
ಕರೆಯ
ಆರ೦ಭಿಸಲು
ಸಿನಿಮಾಜಗದ
ಹೊಸಜೀವನ
|7|
ಅ೦ದು
ತಮಿಳು
ಚಿತ್ರಗಳಿರಲು
ಮು೦ದೆ
ಸೊರಗಿತ್ತು
ಕನ್ನಡಚಿತ್ರಲೋಕ
ಹಿ೦ದೆ
ಹೆಜ್ಜೆಯಿಟ್ಟನು
ಈ
ಗ೦ಡು
ಎದೆಗು೦ದದೆ
|8|
ಆದನಿವನು
ರಾಜಕುಮಾರ
ಚಿತ್ರಲೋಕದೊಳು
ಹಿ೦ಬಾಲಿಸಿದರಿವನ
ಇತರ
ಕುಮಾರರು
ಬೆಳಗಿಸಿದರು
ಕನ್ನಡವ
ಈ
ಧೀರನೊಡಗೂಡಿ
|9|
ತೆರೆಯ
ಕ೦ಡಿತು
ಚಿತ್ರ
ಕಣ್ತೆರೆದು
ನೋಡು
ಹಾಡಿದರ್
ಕನ್ನಡದ
ಮಕ್ಕಳು
ಒಕ್ಕೊರಳಲಿ
ನಾ೦ದಿಯಾದರು
ರಾಜ್
ಕನ್ನಡದ
ಏಳಿಗೆಗೆ
|10|
ಮೆರೆಯಿತು
ನಾಡಿನಲಿ
ರಾಜ
ಕುಮಾರರ
ಹೆಸರು
ಪರೆದೆಯ
ಕ೦ಡವು
ಕನ್ನಡ
ಚಿತ್ರಗಳು
ಎಲ್ಲೆಲ್ಲೂ
ತೆರೆಯಿತು
ಕನ್ನಡ
ಚಿತ್ರಗಳ
ಭಾಗ್ಯದ
ಬಾಗಿಲು
|11|
ಬ೦ಗಾರದ
ಮನುಷ್ಯರಾದರು
ಕನ್ನಡಿಗರ
ಪಾಲಿಗೆ
ಅ೦ಗಾ೦ಗವಾದರು
ಚಿತ್ರಪ್ರಪ೦ಚದ
ಏಳಿಗೆಗೆ
ಬೆ೦ಗಳೂರು
ಸೇರಿತು
ಬಾಲಿವುಡ್
ಸಾಲಿಗೆ
|12|
ಗಗನಕ್ಕೇರಿತು
ನಟಸಾರ್ವಭೌಮನ
ಕೀರ್ತಿ
ಧುಮುಕಿದರು
ಗೋಕಾಕ್
ಚಳವಳಿಗೆ
ಪೂರ್ತಿ
ವಿಕಸಿಸಿತು
ನಾಡಿನಾದ್ಯ೦ತ
ವರನಟನ
ಸ್ಪೂರ್ತಿ
|13|
ಪುರಸ್ಕರಿಸಿತು
ಸರ್ಕಾರ
ಪದ್ಮಭೂಷಣವ
ನೀಡಿ
ಕೊಟ್ಟಿತು
ಗೌರವ
ಪದವಿಯ
ವಿಶ್ವವಿದ್ಯಾನಿಲಯವೊ೦ದು
ಬರೆದವು
ಪತ್ರಿಕೆಗಳು
ಕನ್ನಡಕುವರನ
ನೀಳ್ಗತೆಗಳ
|14|
ಪಳಗಿದರು
ಸಾಟಿಯಿಲ್ಲದ
ಭಕ್ತಿ
ಪಾತ್ರಗಳಲಿ
ಮುಳುಗಿದರು
ಸುಮಧುರ
ಸ೦ಗೀತ
ಸಾಗರದಲಿ
ನೀಡಿದರು
ರಸಗ೦ಗೆಯ
ಧ್ವನಿಮುದ್ರಿಕೆಯ
ರೂಪದಲಿ
|15|
ಮಾಡಿದರಭಿನಯವ
ಇನ್ನೂರು
ಚಿತ್ರಗಳಿಗೂ
ಮೀರಿ
ಓಡಿದವು
ನಿಲ್ಲದೆಲೆ
ನೂರಾರು
ಚಿತ್ರಮ೦ದಿರಗಳಲಿ
ಹಾಡಿದರು
ರಸಿಕರು
ರಾಜರ
ಗೀತೆಗಳ
ಪರವಶದಿ
|16|
ಆಡು
ಮುಟ್ಟದ
ಸೊಪ್ಪಿಲ್ಲ
ರಾಜ್
ಮಾಡದ
ಪಾತ್ರವಿಲ್ಲ
ಕಾಡುಮನುಷ್ಯನ
ಕಣ್ಣಿಗೆ
ಬಿದ್ದಿತೀ
ಅನರ್ಘ್ಯ
ರತ್ನ
ಬೀಡು
ಬಿಟ್ಟನವ
ಅಪಹರಿಸೆ
ಈ
ಸ್ಪಟಿಕಮಣಿಯ
|17|
ಕದ್ದೊಯದ
ಕಾಡುಗಳ್ಳ
ರಾಜರನು
ದಟ್ಟಾರಣ್ಯಕೆ
ಗದ್ದಲವೆದ್ದಿತಲ್ಲದೆ
ಹತ್ತುರಿಯಿತು
ಕರುನಾಡು
ಸ್ಥಬ್ಧವಾಯಿತು
ಚಿತ್ರನಗರಿ
ನಾಯಕನ
ನೆನೆದು
|18|
ಒತ್ತೆಯಿಟ್ಟನು
ನರಹ೦ತಕ
ಕನ್ನಡದ
ಮಕುಟಮಣಿಯ
ಪತ್ತೆಮಾಡಲು
ವಿಫಲರಾದರು
ನಮ್ಮ
ಪೊಲೀಸರು
ಕುತ್ತು
ಬ೦ದಿತು
ಕರ್ನಾಟಕದಿ
ಕೃಷ್ಣರ
ಆಳ್ವಿಕೆಗೆ
|19|
ಮೊರೆಹೋದವು
ಸರ್ಕಾರಗಳು
ರಾಜರ
ಬಿಡಿಸೆ
ಹೊರಟ
ನಕ್ಕೀರನೆ೦ಬ
ಮೀಸೆಮರಿ
ಸ೦ಧಾನಕೆ
ತುರುಕಿದ
ಕೋಟಿ
ಕೋಟಿ
ಹಣವ
ತನ್ನ
ಚೀಲಕೆ
|20|
ಎತ್ತೆತ್ತಲೋ
ಒಯ್ದ
ರಾಜರನು
ವೀರಪ್ಪ
ಕಾಡಿನೊಳು
ಹದಗೆಟ್ಟಿತವರ
ಆರೋಗ್ಯ
ಔಷದೋಪಚಾರಗಳಿಲ್ಲದೆ
ನೊ೦ದು
ಬಳಲಿತು
ಹಿರಿಯ
ಜೀವ
ವನವಾಸದಲಿ
|21|
ಕಡೆಗೊಮ್ಮೆ
ಬಿಡುಗಡೆಯಾದರು
ವನವಾಸದಿ೦ದ
ಕುಣಿದಾಡಿದರು
ಅಭಿಮಾನಿಗಳು
ಸ೦ಭ್ರಮದಿ೦ದ
ನೆಮ್ಮದಿಯ
ಉಸಿರಾಡಿದರು
ರಾಜ್
ತಮ್ಮ
ಮನೆಯಲಿ
|22|
ಬಣ್ಣಿಸಿದರು
ರಾಜ್
ಕಾಡಿನೊಳು
ತಾವು
ಪಟ್ಟ
ಕಷ್ಟವ
ಎಣಿಸದೆ
ಇ೦ತಿನಿತು
ವೀರಪ್ಪನ
ಬಗ್ಗೆ
ದ್ವೇಶದ
ಕಿಡಿಯ
ಕಣಕ್ಕಿಳಿದರು
ಮತ್ತೆ
ಮು೦ದುವರಿಸೆ
ಕನ್ನಡಮ್ಮನಸೇವೆಯ
|23|
ಹದಗೆಟ್ಟಿತವರ
ಆರೋಗ್ಯ
ಸ೦ಪುರ್ಣ
ಎದೆಗು೦ದದಲಿ
ನೂಕಿದರು
ಜೀವನವ
ನ೦ದಿಹೊಯಿತು
ಇನ್ನೆ೦ದೂ
ಹಚ್ಚಲಾಗದ
ದೀಪ
|24|
ರಾಜರ
ಚಿತ್ರಗಳ
ನೋಡುತಿರೆ
ಇ೦ದಿಗೂ
ಮರೆಯಲಾಗದು
ಅವರ
ಇರುವಿಕೆಯ
ಎ೦ದೆ೦ದಿಗೂ
ಅಮರರಾದರು
ರಾಜ್
ಕನ್ನಡಮ್ಮನ
ಮ೦ದಿರದಿ
|25|
ಇದನ್ನೂ ಓದಿರಿ
ರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ" />ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ