ಆಟೋ ರಾಮಣ್ಣನಿಂದ ಶಂಕರ ಸವಿನೆನಪು

ಶಂಕರಣ್ಣ ಚಿತ್ರರಂಗ ಬಿಟ್ಟು ಹೋಗಿರುವುದು ಕನ್ನಡ ಚಿತ್ರೋದ್ಯಮಕ್ಕೆ ಆರದ ಗಾಯ. ನಾಟಕ, ಧಾರಾವಾಹಿ, ಸಿನಿಮಾ ಹೀಗೆ ಎಲ್ಲವೂ ಇಂದು ಶಂಕರಣ್ಣನಿಲ್ಲದೇ ಬರಿದೆನಿಸುತ್ತಿದೆ. ವರನಟ ರಾಜ್ ಕುಮಾರ್ ನಟಿಸಿ, ಶಂಕರಣ್ಣ ನಿರ್ದೆಶಿಸಿದ್ದ 'ಒಂದು ಮುತ್ತಿನ ಕಥೆ' ಚಿತ್ರ ಇಂದಿಗೂ ನಮ್ಮನ್ನು ಕಾಡುತ್ತಿದೆ. ಅದು ಇಬ್ಬರು ಪ್ರತಿಭಾವಂತರ 'ಅಪೂರ್ವ ಸಂಗಮ' ಎಂದರೂ ತಪ್ಪಾಗಲಾರದು. 'ಆಟೋರಾಜ' ಚಿತ್ರ ನಮಗೆ ಇಂದಿಗೂ ಮಾದರಿ.
ಆಟೋ ಚಾಲಕರ ಕಷ್ಟ, ಸುಖಗಳನ್ನು ತೆರೆಯ ಮೇಲೆ ತೋರಿಸಿ, ನಮ್ಮ ಕರ್ತವ್ಯವೇನೆಂದು ಅರ್ಥ ಮಾಡಿಸಿದವರು ಶಂಕರನಾಗ್. ಪೊಲೀಸ್ ಅಧಿಕಾರಿಗಳು ಹೇಗಿರಬೇಕೆಂದು ಶಂಕರನಾಗ್ ನಟಿಸಿರುವ ಸಾಂಗ್ಲಿಯಾನ, ಸಿಬಿಐ ಶಂಕರ್ ಚಿತ್ರಗಳನ್ನು ನೋಡಿ ಕಲಿಯಬೇಕು. ಇಂದು ನಮ್ಮೊಂದಿಗೆ ಶಂಕರನಾಗ್ ಇಲ್ಲದಿದ್ದರೂ ಅವರು ಹಾಕಿಕೊಟ್ಟ ದಾರಿಯಲ್ಲೇ ನಾವು ಸಾಗುತ್ತಿದ್ದೇವೆ.
ಶಂಕ್ರಣ್ಣ ಬಿಟ್ಟುಹೋದ ನೆನಪುಗಳ ಮಾತು ಮಧುರ!
ಶಂಕರಣ್ಣನ ಸವಿನೆನೆಪು
ಉಸಿರಿರುವವರೆಗೂ ನಿಮ್ಮನ್ನು ಧ್ಯಾನಿಸುವೆ
ನನ್ನ ಗುರಿ-ನನ್ನ ಗುರು ಎಲ್ಲವೂ ನೇವೆ
ನಿಮ್ಮ ಸಾಧನೆ ಸಾಗರದಷ್ಟು - ಮೊಗೆದರೂ ಮುಗಿಯದಷ್ಟು
ಆಟೋ ರಾಮಣ್ಣ (ಬಳ್ಳಾರಿ ಫೈಟರ್), ಬೆಂಗಳೂರು
ಕೃಪೆ: ಸಿನಿಗಂಧ


Click it and Unblock the Notifications











