ಮರೆಯಲಾಗದ ಅಪೂರ್ವ ಮಾಣಿಕ್ಯ ಶಂಕರನಾಗ್

ಸೂರ್ಯ ಅವರು ಬೆಂಗಳೂರಿನಲ್ಲಿ ಆಟೋ ಚಾಲಕ. ಆಟೋದಲ್ಲೇ ಬೆಂಗಳೂರು ಸುತ್ತುವ ಸೂರ್ಯನಿಗೆ ಕನ್ನಡ ಚಿತ್ರರಂಗದ ಆಟೋರಾಜ, ಆಟೋ ಚಾಲಕರ ಪಾಲಿನ ಪರಮ ಗುರು ಶಂಕರನಾಗ್ ಬಗ್ಗೆ ಮಾತನಾಡಿ ಎಂದಾಗ ಸಂತೋಷದಿಂದ ಒಪ್ಪಿದರು. 'ಶಂಕರಣ್ಣ ನಮ್ಮ ಗುರುಗಳು ಸಾರ್.. ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು.." ಎನ್ನುತ್ತಲೇ ಮಾತಿಗೆ ಕುಳಿತರು.
ಕನ್ನಡದ ಕುಲಪುತ್ರ: "ಶಂಕರಣ್ಣ ನಿಜವಾಗಿಯೂ ಕನ್ನಡದ ಕುಲಪುತ್ರ. ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಅಗಾಧ ಸಾಧನೆ ಮಾಡಿ, ಮರೆಯಾದವರು. ಕನ್ನಡಿಗರಿಗೆ ಮರೆಯಲಾಗದ ಮಾಣಿಕ್ಯ. ಸದಾ ಸಮಾಜಮುಖಿಯಾಗಿದ್ದರು. ಶಂಕರಣ್ಣ ಸಮಾಜಕ್ಕಾಗಿ ಸೇವೆ ಸಲ್ಲಿಸಬೇಕೆಂದು ಯಾವಾಗಲೂ ಯೋಚಿಸುತ್ತಿದ್ದರು.
ಚಿತ್ರರಂಗದಲ್ಲಿ ಸರಳಜೀವಿಯಾಗಿ, ಆದರ್ಶ ಗುಣದ ನಿರ್ದೇಶಕರಾಗಿ, ನಾಯಕ ನಟರೂ ಆದವರು ಅತಿ ವಿರಳ. ಗೋಕಾಕ್ ಚಳುವಳಿಯ ಸಮಯದಲ್ಲಿ ಶಂಕರಣ್ಣ ಭಾಷೆ, ನಾಡಿನ ಬಗ್ಗೆ ತೋರಿದ ಕಾಳಜಿ ಕನ್ನಡಿಗರಿಗೆ ಮಾದರಿಯಾಗಿತ್ತು. ಅಂದಿನ ಶಂಕರನಾಗ್ ದೂರದೃಷ್ಟಿ ಇಂದು ಸಾಕಾರಗೊಳ್ಳುತ್ತಿದೆ.
ಇಂತಿ ನಿಮ್ಮ ಭಾವುಕ ಅಭಿಮಾನಿ ಸೂರ್ಯ (ಆಟೋ ಚಾಲಕ, ಬೆಂಗಳೂರು)
ಇನ್ನೊಬ್ಬ ಅಭಿಮಾನಿಯ ಮಾತುಗಳು ಮುಂದಿನ ಪುಟದಲ್ಲಿ...
ಕೃಪೆ: ಸಿನಿಗಂಧ


Click it and Unblock the Notifications











