Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಗ್ನಿ ಶ್ರೀಧರ್ ಅವರ ಹೊಸ ಚಿತ್ರ 'ಕಳ್ಳರ ಸಂತೆ'
ಮಾಸ್ಟರ್ ಹಿರಣ್ಣಯ್ಯ ಮತ್ತು ಚೋ ರಾಮಸ್ವಾಮಿ ಅವರ ರಾಜಕೀಯ ವಿಡಂಬನೆಯನ್ನು ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ. ಸಮಾಜದ ಎಲ್ಲ ಪಾತ್ರಗಳನ್ನು ಚಿತ್ರದಲ್ಲಿ ಕಾಣಬಹುದು. ವಾರಪತ್ರಿಕೆಯೊಂದರ ಸಂಪಾದಕರು ಸಹ ಚಿತ್ರದ ಭಾಗವಾಗಿದ್ದಾರೆ ಎಂದು ಅವರು ವಿವರ ನೀಡಿದರು. ಚಿತ್ರದಲ್ಲಿ ವಿಧಾನ ಸೌಧವನ್ನು ಒಂದು ಸಂಕೇತವಾಗಿ ತೋರಿಸಲಿದ್ದೇವೆ. ಸುಮನಾ ಕಿತ್ತೂರು ಅವರ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇದೆ. ಅವರು ಈ ಚಿತ್ರವನ್ನು ಅದ್ಭುತವಾಗಿ ತೆರೆಗೆ ತರುತ್ತಾರೆ ಎಂಬ ವಿಶ್ವಾವನ್ನು ಅಗ್ನಿ ಶ್ರೀಧರ್ ವ್ಯಕ್ತಪಡಿಸಿದರು.
ಇನ್ನು ಸುಮನಾ ಕಿತ್ತ್ತೂರು ಬಗ್ಗೆ ಹೇಳಬೇಕಾದರೆ, ಈ ಚಿತ್ರಕ್ಕಾಗಿ ಅವರು ಬಹಳಷ್ಟು ಶ್ರಮ ತೆಗೆದುಕೊಂಡಿದ್ದಾರೆ. ರಾಜಕಾರಣಿಗಳ ನಡವಳಿಕೆಯನ್ನು ಹತ್ತಿರದಿಂದ ಅಧ್ಯಯನ ಮಾಡಲು ಮೂರು ತಿಂಗಳು ಶ್ರಮಿಸಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ವಿ.ಮನೋಹರ್ ಸಂಗೀತ ಸಂಯೋಜನೆಯ ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಹಾಡುಗಳನ್ನು ಮಡಿಕೇರಿಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಕಳ್ಳರ ಸಂತೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಸುಮನಾ ತಲ್ಲೀನರಾಗಿದ್ದಾರೆ.
ಚಿತ್ರದ ನಾಯಕ್ ಯಶ್. ಕನ್ನಡ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಯಶ್ ಒಂಚೂರು ಸಂಕೋಚ ಸ್ವಭಾವದ ನಟ. ಜೀವನದ ಹಲವಾರು ಮಗ್ಗಲುಗಳನ್ನು ಚಿತ್ರದ ಪಾತ್ರ ಪರಿಚಯಿಸುತ್ತದೆ . ಹಾಗಾಗಿ ಕಳ್ಳರ ಸಂತೆಯನ್ನು ಒಪ್ಪಿಕೊಂಡೆ ಎನ್ನುತ್ತಾರೆ ಯಶ್. ಚಿತ್ರದ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಸುಂದರನಾಥ್ ಸುವರ್ಣ ಅವರು 'ಕಳ್ಳರ ಸಂತೆ'ಯನ್ನು ತಮ್ಮ ಕ್ಯಾಮೆರಾದಲ್ಲಿ ಬಂಧಿಸಲಿದ್ದಾರೆ. ಈ ಚಿತ್ರ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಅಗ್ನಿ
ಶ್ರೀಧರ್
ಮತ್ತು
ಮಂಜುರಿಂದ
ಪ್ರಶಸ್ತಿ
ತಿರಸ್ಕಾರ
ಸ್ಲಂ
ಬಾಲ:
ಖಂಡಿತ
ನೋಡಲೇ
ಬೇಕಾದ
ಚಿತ್ರ
ವಿಜಯ್
ಮತ್ತು
ಶುಭಾ
ನಡುವಿನ
ಗಾಸಿಪ್
ನಿಜವೇ?