Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ರಂಪಾಟದ ಬಗ್ಗೆ ಅಶ್ವಿನಿ ಕೊಟ್ಟ ವಿವರಣೆ
ತಮ್ಮ ಸಹ ನಟ ಪ್ರೇಮ್ ಕುಮಾರ್ ರನ್ನು ಸ್ನೇಹಕೂಟಕ್ಕೆ ಆಹ್ವಾನಿಸುವ ಜವಾಬ್ದಾರಿಯನ್ನೂ ರಮ್ಯಾ ತೆಗೆದುಕೊಂಡಿದ್ದರು. ಸ್ನೇಹಕೂಟದಲ್ಲಿ ಔತಣಕೂಟ ಇದ್ದರೆ ಚೆನ್ನಾಗಿರುತ್ತದೆ ಎಂದು ರಮ್ಯಾ ಹೇಳಿದ್ದರು. ಊಟಕ್ಕೂ ಮುಂಚೆ ಒಂದು ಸಣ್ಣ ಪತ್ರಿಕಾಗೋಷ್ಠಿಯೂ ಇರಲಿ ಎಂದು ನಾನು ಸಲಹೆ ಕೊಟ್ಟೆ. ಚಿತ್ರದ ಬಗ್ಗೆ ಒಂದೆರಡು ಮಾತನಾಡಲೂ ಹೇಳಿದ್ದೆ. ಹಾಗಾಗಿ ರಮ್ಯಾ ಬರುವಿಕೆಗಾಗಿ ನಾನು ಕಾದೆ.ಆದರೆ ರಮ್ಯಾ , ನಾನು ಬರುವುದು ಸ್ವಲ್ಪ ತಡವಾಗುತ್ತದೆ. ನೀವು ಮುಂದುವರಿಸಿ ಊಟಕ್ಕೆ ಬರುತ್ತೇನೆ ಎಂದು ತಿಳಿಸಿದ್ದರು.
ಆದರೆ ಅವರು ಬರುವಷ್ಟರಲ್ಲಿ ಇಡೀ ಸ್ನೇಹಕೂಟ ವಿವಾದಾತ್ಮಕವಾಗಿ ಪರಿಣಮಿಸಿತು. ಇದೊಂದು ಮಿಸ್ ಕಮ್ಯುನಿಕೇಷನ್ ಸಮಸ್ಯೆ. ದಯವಿಟ್ಟು ಇದೊಂದು ಗಿಮಿಕ್ ಎಂದು ಮಾತ್ರ ಅರ್ಥೈಸಿಕೊಳ್ಳಬೇಡಿ. ನಾನು ಈ ರೀತಿಯ ಸಣ್ಣಪುಟ್ಟ ಪ್ರಚಾರಕ್ಕೆ ಬೆಲೆ ಕೊಡುವುದಿಲ್ಲ. ಉತ್ತಮ ಚಿತ್ರವನ್ನು ನಿರ್ಮಿಸಬೇಕೆಂದು ಬಹಳಷ್ಟು ಶ್ರಮವಹಿಸಿದ್ದೇನೆ ಎಂದರು.
ಅಶ್ವಿನಿ ರಾಮ್ ಪ್ರಸಾದ್ ತಮ್ಮ ಮುಂದಿನ ಚಿತ್ರದ ಬಗ್ಗೆ ವಿವರನೀಡಿದರು. ಚಿತ್ರದ ಹೆಸರು 'ಪಡ್ಡೆ ಹುಡುಗ'. ಲೂಸ್ ಮಾದ ಖ್ಯಾತಿಯ ಯೋಗಿ ಚಿತ್ರದ ನಾಯಕ. ವರ್ಧನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ತಮಿಳಿನ ರವಿ ಚಕ್ರವರ್ತಿ ನಿರ್ದೇಶನ ಈ ಚಿತ್ರಕ್ಕಿರುತ್ತದೆ ಎಂದು ಅಶ್ವಿನಿ ರಾಮ್ ಪ್ರಸಾದ್ ತಿಳಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)