Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿವೇಕ್ ಒಬೆರಾಯ್ ಪತ್ನಿ ವಿರುದ್ಧ ವಂಚನೆ ಆರೋಪ
ನಂದಿನಿ ಆಳ್ವ ಹಾಗೂ ಪ್ರಿಯಾಂಕಾ ಆಳ್ವ ಅವರ ಎಎಲ್ವಿ ಪ್ರಾಜೆಕ್ಟ್ ಸಂಸ್ಥೆಯಲ್ಲಿ 2007ರಿಂದ ಎನ್ ವಿನೋದ್ ಎಂಬುವವರು ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮಗೆ ರು.75 ಲಕ್ಷ ವಂಚಿಸಲಾಗಿದೆ ಎಂದು ಆಳ್ವ ಕುಟುಂಬದ ವಿರುದ್ಧ 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸ ದೂರು ನೀಡಿದ್ದರು.
ಈ ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವಂತೆ ಸದಾಶಿವನಗರ ಪೊಲೀಸರಿಗೆ ನಿರ್ದೇಶಿಸಿದೆ. ಅದರ ಪ್ರಕಾರ, ನಂದಿನಿ ಆಳ್ವ, ಪ್ರಿಯಾಂಕಾ ಆಳ್ವ, ಸಂಸ್ಥೆಯ ವ್ಯವಸ್ಥಾಪಕ ನೀಲೋಸರ್ ಹಮೀದ್ ವಿರುದ್ಧ ಐಪಿಸಿ 120 ಬಿ, 420 ಹಾಗೂ 406 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಆಳ್ವ ಅವರ ಎಎಲ್ವಿ ಪ್ರಾಜೆಕ್ಟ್ ಕಂಪನಿಯು ಮೂಲ ವಾರಸುದಾರರಿಂದ ಭೂಮಿ ಖರೀದಿಸಿ ಮತ್ತೊಂದು ಕಂಪನಿಗೆ ಮಾರಾಟ ಮಾಡುತ್ತಿತ್ತು. ಹೀಗೆ ಮಾರಾಟ ಮಾಡುತ್ತಿದ್ದ ಜಮೀನಿನ ಮೂಲ ವಾರಸುದಾರರಿಂದ ಭೂ ದಾಖಲೆಗಳನ್ನು ಪರಿಶೀಲಿಸಿ ಆಳ್ವ ಹೆಸರಿಗೆ ನೋಂದಣಿ ಮಾಡಿಸುವ ಕೆಲಸವನ್ನು ಎನ್ ವಿನೋದ್ ಮಾಡುತ್ತಿದ್ದರು. ಹೀಗೆ ಕಾನೂನು ಸಲಹೆ ನೀಡಲು ರು.75 ಲಕ್ಷ ಶುಲ್ಕ ನೀಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಂದಿನಿ ಆಳ್ವ ಅವರು ಆ ಹಣವನ್ನು ನೀಡದೆ ವಂಚಿಸಿದ್ದಾರೆ ಎಂದು ವಿನೋದ್ ದೂರು ನೀಡಿದ್ದಾರೆ. (ಏಜೆನ್ಸೀಸ್)